ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಲ್ಲಿ ಸ್ಫೋಟಕಗಳಿದ್ದವೇ?
ಬೆಂಗಳೂರು : ಯಶವಂತಪುರದಿಂದ ದೆಹಲಿಗೆ ತೆರಳಬೇಕಿದ್ದ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿದೆ. ಈ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಜೊತೆಗೆ ಲಕ್ಷಾಂತರ ರೂ. ಮೌಲ್ಯದ ಸರಕು ಭಸ್ಮಗೊಂಡಿದೆ.
ಯಶವಂತಪುರ ರೈಲು ನಿಲ್ದಾಣದಲ್ಲಿ ನಿಂತಿದ್ದ ಈ ರೈಲಿನ ಸರಕು ಸಾಗಣೆ ಬೋಗಿಗೆ ಕಾರ್ಮಿಕರು, ಸರಕಿನ ಬಾಕ್ಸ್ಗಳನ್ನು ತುಂಬುತ್ತಿದ್ದರು. ಬಾಕ್ಸ್ಗಳನ್ನು ತುಂಬಿದ ಕೆಲ ನಿಮಿಷಗಳಲ್ಲಿಯೇ ಸ್ಫೋಟ ಸಂಭವಿಸಿ, ಬೆಂಕಿ ಕಾಣಿಸಿಕೊಂಡಿತು. ಭಾನುವಾರ ರಾತ್ರಿ 7ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದ ಕಾರಣ ಪತ್ತೆಯಾಗಿಲ್ಲ.
ಪೊಲೀಸರು ತನಿಖೆಯನ್ನು ಸೋಮವಾರ ಚುರುಕುಗೊಳಿಸಿದ್ದಾರೆ. ರೈಲಿನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸಲಾಗುತ್ತಿದ್ದೆ ಎಂಬುದು ಸದ್ಯದ ಪ್ರಶ್ನೆ.
(ಏಜನ್ಸೀಸ್)
Comments
Story first published: Monday, March 26, 2007, 5:30 [IST]