ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಲ್ಲಿ ಸ್ಫೋಟಕಗಳಿದ್ದವೇ?

By Staff
|
Google Oneindia Kannada News

ಬೆಂಗಳೂರು : ಯಶವಂತಪುರದಿಂದ ದೆಹಲಿಗೆ ತೆರಳಬೇಕಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸ್ಫೋಟ ಸಂಭವಿಸಿದೆ. ಈ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಜೊತೆಗೆ ಲಕ್ಷಾಂತರ ರೂ. ಮೌಲ್ಯದ ಸರಕು ಭಸ್ಮಗೊಂಡಿದೆ.

ಯಶವಂತಪುರ ರೈಲು ನಿಲ್ದಾಣದಲ್ಲಿ ನಿಂತಿದ್ದ ಈ ರೈಲಿನ ಸರಕು ಸಾಗಣೆ ಬೋಗಿಗೆ ಕಾರ್ಮಿಕರು, ಸರಕಿನ ಬಾಕ್ಸ್‌ಗಳನ್ನು ತುಂಬುತ್ತಿದ್ದರು. ಬಾಕ್ಸ್‌ಗಳನ್ನು ತುಂಬಿದ ಕೆಲ ನಿಮಿಷಗಳಲ್ಲಿಯೇ ಸ್ಫೋಟ ಸಂಭವಿಸಿ, ಬೆಂಕಿ ಕಾಣಿಸಿಕೊಂಡಿತು. ಭಾನುವಾರ ರಾತ್ರಿ 7ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದ ಕಾರಣ ಪತ್ತೆಯಾಗಿಲ್ಲ.

ಪೊಲೀಸರು ತನಿಖೆಯನ್ನು ಸೋಮವಾರ ಚುರುಕುಗೊಳಿಸಿದ್ದಾರೆ. ರೈಲಿನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸಲಾಗುತ್ತಿದ್ದೆ ಎಂಬುದು ಸದ್ಯದ ಪ್ರಶ್ನೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X