ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಂತರಂಗ’ ಸಂಸ್ಥೆ ವತಿಯಿಂದ ‘ವಿಶ್ವ ರಂಗ ದಿನಾಚರಣೆ’

By Staff
|
Google Oneindia Kannada News

ಬೆಂಗಳೂರು : ಮಾರ್ಚ್‌27ರಂದು ಆಚರಿಸಲಾಗುವ ವಿಶ್ವರಂಗ ದಿನದ ಅಂಗವಾಗಿ, ಅಂತರಂಗ ಸಂಸ್ಥೆ ರಂಗಭೂಮಿಯಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಿದೆ.

ಹಿರಿಯ ರಂಗಕರ್ಮಿ ಎಚ್‌.ವಿ.ವೆಂಕಟಸುಬ್ಬಯ್ಯ, ಖ್ಯಾತ ರಂಗ ನಿರ್ದೇಶಕ ಆರ್‌.ನಾಗೇಶ್‌, ಖ್ಯಾತ ಬೆಳಕು ತಜ್ಞ ಅ.ನಾ.ರಮೇಶ್‌, ಖ್ಯಾತ ಯುವ ನಿರ್ದೇಶಕ ಮಾಲತೇಶ್‌ ಬಡಿಗೇರ್‌ ಅವರನ್ನು ಸನ್ಮಾನಿಸಲಾಗುವುದು. ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ದತ್ತಣ್ಣ(ದತ್ತಾತ್ರೇಯ) ಹಾಗೂ ಖ್ಯಾತ ಕಲಾ ವಿನ್ಯಾಸಕ ಸುದೇಶ್‌ ಮಹಾನ್‌ ಸನ್ಮಾನಿಸಲಿದ್ದಾರೆ.

ರಂಗಶಂಕರದಿಂದ ಎಚ್‌.ಎನ್‌.ಕಲಾಕ್ಷೇತ್ರದವರೆಗೆ ವಿವಿಧ ರಂಗತಂಡಗಳು ರಂಗಮೆರವಣಿಗೆ ನಡೆಸಲಿವೆ. ಆನಂತರ ಸಂಜೆ 6ಗಂಟೆ ಸುಮಾರು ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ರಂಗಸಾಧಕರ ಅಭಿನಂದನಾ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ವಿವಿಧ ತಂಡಗಳಿಂದ ರಂಗದೃಶ್ಯಾವಳಿ, ರಂಗಗೀತೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲಾಗಂಗೋತ್ರಿ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಡಾ.ಬಿ.ವಿ.ರಾಜಾರಾಂ ನಿರೂಪಿಸಲಿದ್ದು, ಅಂಕಲ್‌ ಶ್ಯಾಂ ನಿರ್ವಹಿಸಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X