ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಜುನಾಥ್ ಹತ್ಯೆಗೈದ ಒಬ್ಬನಿಗೆ ಗಲ್ಲು, ಏಳ್ವರಿಗೆ ಜೈಲು
ಲಖೀಪುರ್ ಖೇರಿ(ಉತ್ತರ ಪ್ರದೇಶ) : ಭಾರತೀಯ ತೈಲ ಸಂಸ್ಥೆಯ ಮಾರಾಟ ವ್ಯವಸ್ಥಾಪಕ ಮಂಜುನಾಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ.
ಹತ್ಯೆಯ ಪ್ರಮುಖ ಆರೋಪಿ ಪವನ್ ಕುಮಾರ್ ಮಿಟ್ಟಲ್ಗೆ ಮರಣದಂಡನೆ ಮತ್ತು ಉಳಿದ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
27ವರ್ಷದ ಕರ್ನಾಟಕದ ಕೋಲಾರ ಮೂಲದ ಮಂಜುನಾಥ್, ಭ್ರಷ್ಟತೆ ಮತ್ತು ತೈಲದ ಕಳ್ಳಸಾಗಾಣಿಕೆ ವಿರುದ್ಧ ಸಮರ ಸಾರಿದ್ದರು. ಮಿಟ್ಟಲ್ರ ಪರವಾನಗಿ ರದ್ದುಗೊಳಿಸಿದ ಕಾರಣ, 2005ರ ನ.19ರಂದು ಕೊಲೆ ನಡೆದಿತ್ತು. ಆರೋಪಿಗಳಿಗೆ ಶಿಕ್ಷೆ ವಿಧಿಸಿದ ವಿಚಾರ ಕೇಳಿದ ಮಂಜುನಾಥ್ ಹೆತ್ತವರು, ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.
(ಏಜನ್ಸೀಸ್)
Comments
Story first published: Monday, March 26, 2007, 5:30 [IST]