ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕಮಾಂಡ್‌ ಗ್ರೀನ್‌ಸಿಗ್ನಲ್‌ ನೀಡಿದರೆ ಮತ್ತೆ ‘ಕೃಷ್ಣ’ಲೀಲೆ!

By Staff
|
Google Oneindia Kannada News

ಬೆಂಗಳೂರು : ‘ಅಲ್ಲಿಯೂ ಇರಲಾರೆ, ಇಲ್ಲಿಗೂ ಬರಲಾರೆ’ ಎನ್ನುವ ಪರಿಸ್ಥಿತಿ, ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಅವರದು. ತಮ್ಮ ಈ ಗೊಂದಲವನ್ನು ಸುದ್ದಿಗಾರರ ಮುಂದೆ ಅವರು ಬಿಚ್ಚಿಟ್ಟಿದ್ದಾರೆ.

ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಛಾಯಾಗ್ರಾಹಕ ವೆಂಕಟೇಶ್‌ ಅವರ, ಏಷ್ಯಾದ ಅತಿ ದೊಡ್ಡ ಅವಿಭಕ್ತ ಕುಟುಂಬ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ನಂತರ ಸುದ್ದಿಗಾರರ ಜೊತೆ ಕೃಷ್ಣ ಮಾತನಾಡುತ್ತಿದ್ದರು.

ಅಭಿಮಾನಿಗಳ ಒತ್ತಡ ದಿನೇದಿನೇ ಹೆಚ್ಚುತ್ತಿದೆ. ಹೈಕಮಾಂಡ್‌ ಒಪ್ಪಿಗೆ ನೀಡಿದ ತಕ್ಷಣ ಸಕ್ರಿಯ ರಾಜಕಾರಣಕ್ಕೆ ಮರಳುತ್ತೇನೆ. ಈ ಕಾರ್ಯಕ್ಕೆ ಸೂಕ್ತ ಸಮಯ ಕಾಯುತ್ತಿದ್ದೇನೆ. ಸೂಕ್ತ ಸಮಯ ಯಾವುದು ಎಂಬುದನ್ನು ನಾನೀಗ ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದರು.

‘ಕೃಷ್ಣ ನೀ ಬೇಗನೇ ಬಾರೋ...’ ಎಂಬ ಅಭಿಮಾನಿಗಳ ಮೊರೆಗೆ ಕೃಷ್ಣ ಕಿವಿಕೊಟ್ಟಿದ್ದಾರೆ... ಮನಸ್ಸು ಯಾವಾಗ ಕೊಡ್ತಾರೋ?

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X