ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಬ್ಬಳ್ಳಿಯಲ್ಲಿ ಆಲಿಕಲ್ಲು ಮಳೆ : ಜನರಿಗೆ ಹಿತಾನುಭವ!
ಹುಬ್ಬಳ್ಳಿ : ಅನಿರೀಕ್ಷಿತವಾಗಿ ಸುರಿದ ಆಲಿಕಲ್ಲು ಮಳೆ ಪರಿಣಾಮ ಧಗೆಯೇರುತ್ತಿರುವ ನಗರಕ್ಕೆ ತಂಪೆರೆದಂತಾಗಿದೆ.
ಬುಧವಾರ ಸಂಜೆ 6ಗಂಟೆಗೆ ಬಿದ್ದ ಮಳೆಯಿಂದ ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿತು. ಶಾಲಾ ಕಾಲೇಜುಗಳಿಂದ ಮನೆಗೆ ತೆರಳುತ್ತಿದ್ದ ಮಕ್ಕಳು, ಮಹಿಳೆಯರು ಪರದಾಡಬೇಕಾಯಿತು. ಈ ಪರದಾಟದ ಮಧ್ಯೆಯೂ ಮಳೆ ಸಂತಸ ತಂದದ್ದು ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು.
ಬೇಸಿಗೆ ಬಂತೆಂದರೆ ಉತ್ತರ ಕರ್ನಾಟಕದಲ್ಲಿ ಬಿಸಿಲ ಬೇಗೆ ಏರುತ್ತಲೇ ಹೋಗುತ್ತದೆ. ಈಗಾಗಲೇ ನಗರದ ಜನತೆಗೆ ಬಿಸಿಲಿನ ಅನುಭವ ಆರಂಭವಾಗಿದ್ದು, ಅನಿರೀಕ್ಷಿತ ಮಳೆ ಎರೆದ ತಂಪಿನಿಂದ ಪುಳಕಗೊಂಡಿದ್ದಾರೆ. ಜನ ಅಲ್ಲಲ್ಲಿ ಆಲಿಕಲ್ಲುಗಳನ್ನು ಬೊಗಸೆಯಲ್ಲಿ ಹಿಡಿದುಕೊಂಡು ಸಂತಸ ಅನುಭವಿಸಿದ ದೃಶ್ಯ ಕಂಡುಬಂತು.
ಸಿಡಿಲಿಗೆ ಮಹಿಳೆ ಬಲಿ : ಹಾವೇರಿ ಹಾಗೂ ಕೊಡಗು ಜಿಲ್ಲೆಯ ಹಲವೆಡೆ ಮಳೆಯಾದ ಕುರಿತು ವರದಿಯಾಗಿದೆ. ಹಾನಗಲ್ ತಾಲ್ಲೂಕು ಕರಗುದರಿ ಗ್ರಾಮದ ರುಸ್ತುಂಬಿ ಹಜರೇಸಾಬ ಜಾತಗೇರ(18) ಎಂಬ ಯುವತಿ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, March 22, 2007, 5:30 [IST]