ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇಶಕ್ಕಾಗಿ ಪ್ರಾಣಕೊಟ್ಟ ಭಗತ್ಗೆ ಎರಡು ಹನಿ ಕಂಬನಿ!
ಬೆಂಗಳೂರು : ಭಗತ್ ಸಿಂಗ್ಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ, ಶುಕ್ರವಾರ ನಗರದಲ್ಲಿ ನಡೆಯಲಿದೆ.
ಮಾ.23 ದೇಶಪ್ರೇಮಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರ್ ಅವರನ್ನು ಗಲ್ಲಿಗೇರಿಸಿದ ದಿನ(23.03.1931). ಈ ದಿನ ಭಗತ್ಸಿಂಗ್ರ 75ನೇ ಪುಣ್ಯತಿಥಿಯೂ ಹೌದು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಸ್ಮರಿಸಲು, ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಗಾಂಧಿ ವಿಗ್ರಹದ ಬಳಿ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಕಾರ್ಯಕ್ರಮವೊಂದು ನಡೆಯಲಿದೆ. ಸಮಾಜ ಸೇವಕರ ಸಮಿತಿ ಈ ಕಾರ್ಯಕ್ರಮವನ್ನು ಸಂಘಟಿಸಿದೆ.
ಭಗತ್ ಸಿಂಗ್ರ ಕನಸುಗಳನ್ನು ನನಸು ಮಾಡಲು ಯುವಕರು ಮುಂದಾಗಬೇಕು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ, ನೈಜ ರಾಷ್ಟ್ರ ನಾಯಕರಿಗೆ ಗೌರವ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, March 22, 2007, 5:30 [IST]