ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಎಂಗೆ ಶ್ವಾನಪ್ರೇಮಿ ಅನಂತಮೂರ್ತಿಯ ಬುದ್ಧಿವಾದ!
ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ, ಶ್ವಾನ ಸಂಹಾರವನ್ನು ಕಟುವಾಗಿ ಟೀಕಿಸಿದ್ದಾರೆ.
ನಾಯಿಗಳನ್ನು ಬೇಟೆಯಾಡಿ ಅಮಾನವೀಯವಾಗಿ ಕೊಲ್ಲುವುದು ಮನುಷ್ಯಕುಲಕ್ಕೆ ಶೋಭೆ ತರುವುದಿಲ್ಲ. ನಾಯಿಗಳು ಆಕ್ರಮಣಕಾರಿ ಧೋರಣೆ ಅನುಸರಿಸಲು, ಜನರೇ ಕಾರಣ. ಒಂದು ಕಾಲದಲ್ಲಿ ಜನರ ಅಕ್ಕರೆಯಲ್ಲಿ ಬೆಳೆಯುತ್ತಿದ್ದ ನಾಯಿಗಳು, ಇಂದು ಬೀದಿಗೆ ಬಿದ್ದಿವೆ. ವ್ಯಕ್ತಿ ಮತ್ತು ನಾಯಿಯ ನಡುವಿನ ವಾತ್ಸಲ್ಯ ಮಾಯವಾಗಿದೆ. ರಾಕ್ಷಸ ಗುಣಗಳನ್ನು ನಾಯಿಗಳು ಮೈಗೂಡಿಸಿಕೊಂಡಿವೆ ಎಂದು ಪತ್ರದಲ್ಲಿ ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಮನುಷ್ಯ ಕುಲದ ನಂಬಿಕೆ ಮತ್ತು ವಿಶ್ವಾಸದ ಸಂಕೇತವಾದ ನಾಯಿಗಳ ಬಗ್ಗೆ ಮನುಕುಲ, ಜವಾಬ್ದಾರಿಯಿಂದ ಯೋಚಿಸಬೇಕಿದೆ. ಆತುರದಿಂದ ವರ್ತಿಸುವುದು ಸಲ್ಲದು. ನೆಗಡಿಯಾಗಿದೆಯೆಂದು ಮೂಗನ್ನು ಕೊಯ್ಯುವ ಪರಿಪಾಠ ಅಸಮರ್ಥನೀಯ ಎಂಬ ಭಾವ ಪತ್ರದಲ್ಲಿ ವ್ಯಕ್ತವಾಗಿದೆ.
ಈ ವಾದವನ್ನು ನೀವು ಒಪ್ಪುವಿರಾ?
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, March 21, 2007, 5:30 [IST]