ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇಲುಕೋಟೆಯಲ್ಲಿ ವೇದ ಸಂಸ್ಕೃತಿ ಮ್ಯೂಸಿಯಂ ಆರಂಭ
ಮಂಡ್ಯ : ಮೇಲುಕೋಟೆಗೆ ಹೋಗುವ ಭಕ್ತಾದಿಗಳು ಚೆಲುವನಾರಾಯಣ ಸ್ವಾಮಿಯ ಜೊತೆಗೆ, ವೇದಕಾಲೀನ ಸಂಸ್ಕೃತಿಯನ್ನು ಪರಿಚಯಿಸುವ ಮ್ಯೂಸಿಯಂ ಅನ್ನು ಕಾಣಬಹುದು.
ಆನಂದಲ್ಯಾರ್ ಸ್ಮಾರಕ ಟ್ರಸ್ಟ್ ಸ್ಥಾಪಿಸಿರುವ ಈ ವಸ್ತು ಸಂಗ್ರಹಾಲಯಕ್ಕೆ ಪರಂಪರಾ- ಸಂಪ್ರದಾಯ ಎಂದು ಹೆಸರಿಡಲಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಸಂಪ್ರದಾಯ ಉಡುಗೆ-ತೊಡುಗೆಗಳು, ಹಸೆಗಳು, ಕರ-ಕುಶಲ ವಸ್ತುಗಳ ಜೊತೆಗೆ ವೇದ ಕಾಲೀನ ಗ್ರಂಥಗಳು ನೋಡಬಹುದಾಗಿದೆ.
ವೇದ ಕಾಲದ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯನ್ನು ಜನರಿಗೆ ತಲುಪಿಸುವುದೇ ನಮ್ಮ ಗುರಿ ಎಂದು ಅನಂದಲ್ಯಾರ್ ಟ್ರಸ್ಟಿ ತಿರು ಅಯ್ಯಂಗಾರ್ ಹೇಳುತ್ತಾರೆ.
(ಏಜನ್ಸೀಸ್)
Story first published: Sunday, March 18, 2007, 5:30 [IST]