ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೆಸ್ಟ್ಇಂಡೀಸ್ನಲ್ಲಿ ಮಡಿಕೇರಿ ವ್ಯಾಪಾರಿ ನೀರುಪಾಲು
ಮಡಿಕೇರಿ : ವ್ಯಾಪಾರದ ನಿಮಿತ್ತ ವೆಸ್ಟ್ಇಂಡೀಸ್ಗೆ ತೆರಳಿದ್ದ ಕೊಡಗಿನ ವ್ಯಕ್ತಿಯೋರ್ವ, ಟ್ರಿನಿಡಾಡ್ನ ಈಜುಕೊಳವೊಂದರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಕಾವೇರಿ ಎಕ್ಸ್ಟೆನ್ಷನ್ ನಿವಾಸಿಗಳಾದ ಬಿ.ಎಂ.ಗೋಪಣ್ಣ ರೈ ಹಾಗೂ ಬಿ.ಎಸ್.ಲಲಿತಾ ಅವರ ಪುತ್ರ ವಿನೋದ್ ರೈ(31) ಮೃತ ದುರ್ದೈವಿ. ವಿನೋದ್ ರೈ ಆಟಿಗೆ ಸಾಮಾನುಗಳ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಟ್ರಿನಿಡಾಡ್ನ ಬೇಬ್ ಎಂಬಲ್ಲಿಯ ಈಜುಕೊಳವೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ.
ವಿನೋದ್ ಸಾವಿನ ಕುರಿತು ಅವರ ಜೊತೆ ಪ್ರಯಾಣದಲ್ಲಿದ್ದ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ಮೃತದೇಹವನ್ನು ಇಲ್ಲಿಗೆ ತರುವುದು ಕಷ್ಟವಾದ್ದರಿಂದ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗುವುದು. ಈ ನಿಮಿತ್ತ ವಿನೋದ್ ಚಿಕ್ಕಪ್ಪ ಶೇಖರ್ ಶೆಟ್ಟಿ ವೆಸ್ಟ್ಇಂಡೀಸ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೃತರ ಕುಟುಂಬದ ಮೂಲಗಳು ಹೇಳಿವೆ.
(ಏಜನ್ಸೀಸ್)
Comments
Story first published: Thursday, March 15, 2007, 5:30 [IST]