ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರವಿ ಬೆಳಗೆರೆ ಹುಟ್ಟುಹಬ್ಬಕ್ಕೆ ನೀವೂ ಶುಭಾಶಯ ಹೇಳಿ..
ಬೆಂಗಳೂರು : ಗುರುವಾರ(ಮಾ.15) ಪತ್ರಕರ್ತ ಮತ್ತು ನಮ್ಮ ದಟ್ಸ್ ಕನ್ನಡ ಅಂಕಣಕಾರ ರವಿಬೆಳಗೆರೆ ಅವರ ಹುಟ್ಟುಹಬ್ಬ.
ಮೊನ್ನೆಯಷ್ಟೇ ಕೆಲಸದ ಒತ್ತಡದಿಂದ ದಣಿದು, ಆಸ್ಪತ್ರೆ ಸೇರಿದ್ದ ಬೆಳಗೆರೆ, ಈಗ ಚೇತರಿಸಿಕೊಂಡಿದ್ದಾರೆ. ಹೊಸ ಚೈತನ್ಯದೊಂದಿಗೆ ಮತ್ತೆ ಬಿಜಿಯಾಗಿದ್ದಾರೆ.
‘ಹಾಯ್ ಬೆಂಗಳೂರ್’ ಪತ್ರಿಕೆ ಮೂಲಕ, ಹೊಸ ಓದುಗರ ಸೃಷ್ಟಿಸಿದ ಬೆಳಗೆರೆ, ಇಂದು ಕೇವಲ ಪತ್ರಕರ್ತರಾಗಿ ಉಳಿದಿಲ್ಲ. ಕಿರುತೆರೆ, ಸಿನಿಮಾ, ಸೀಡಿ, ಶಾಲೆ, ಸಮಾಜ ಸೇವೆ -ಹೀಗೆ ನಾನಾ ರಂಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರವಿ ಬೆಳಗೆರೆ ಅಭಿಮಾನಿಗಳು ಅವರಿಗೆ ಶುಭಾಶಯ ಹೇಳಬಹುದು. ಅವರ ಇ-ವಿಳಾಸ - [email protected]
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, March 15, 2007, 5:30 [IST]