ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಸನದಲ್ಲಿ ಸುಗಮ ಸಂಗೀತ ಕೋಗಿಲೆಗಳ ಸಮಾಗಮ!
ಹಾಸನ : ರಾಜ್ಯಮಟ್ಟದ ಐದನೇ ಸುಗಮ ಸಂಗೀತ ಸಮ್ಮೇಳನ ಹಾಸನದಲ್ಲಿ ಮಾ.30 ಮತ್ತು 31ರಂದು ನಡೆಯಲಿದೆ.
ಜಿಲ್ಲಾಧಿಕಾರಿ ಮತ್ತು ಗೀತೋತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಕೆ.ಹೆಚ್.ಅಶ್ವಥ್ನಾರಾಯಣ ಗೌಡ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಫೆ.10 ಮತ್ತು 11ರಂದು ನಡೆಯಬೇಕಿದ್ದ ಸಮ್ಮೇಳನವನ್ನು, ಕಾವೇರಿ ನ್ಯಾಯಮಂಡಳಿ ತೀರ್ಪಿನಿಂದ ಉಂಟಾದ ಬಿಗುಪರಿಸ್ಥಿತಿಯಿಂದಾಗಿ ಮುಂದೂಡಲಾಗಿತ್ತು. ಈಗ ಸಮ್ಮೇಳನದ ಯಶಸ್ಸಿಗೆ ಅಗತ್ಯ ಸಿದ್ಥತೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಾಡಿನ ಸುಗಮ ಸಂಗೀತ ಗಾಯಕ-ಗಾಯಕಿಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಗಮ ಸಂಗೀತ ಪ್ರೇಮಿಗಳು, ಹಾಸನಕ್ಕೆ ಹೋದರೆ, ಮಾರ್ಚ್ ತಿಂಗಳ ಕೊನೆಯ ಎರಡು ದಿನಗಳು ಹೊಸ ಅನುಭವವನ್ನು ಕಟ್ಟಿಕೊಡಲಿವೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, March 14, 2007, 5:30 [IST]