ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಲಿ ಮತ್ತು ಚಿರತೆ ಚರ್ಮ ವಶ : ಇಬ್ಬರ ಬಂಧನ
ಮಂಗಳೂರು : ನಗರದ ಹಳೆಯ ಬಸ್ ನಿಲ್ದಾಣದ ಬಳಿ ಚಿರತೆ ಹಾಗೂ ಹುಲಿ ಚರ್ಮ ಮಾರುತ್ತಿದ್ದ ಇಬ್ಬರು ವ್ಯಕ್ತಿಗಳು ರೌಡಿ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ.
ಬಂಧಿತರನ್ನು ಕುಶಾಲ್ ಮತ್ತು ಕೇಶವ್ ಎಂದು ಗುರುತಿಸಲಾಗಿದ್ದು, ಸೋಮವಾರ(ಮಾಚ್ 12)ದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಖಚಿತ ಸುಳಿವು ಹಿಡಿದು ಕೊಳ್ಳುವವರ ಮಾರುವೇಶದಲ್ಲಿ ರೌಡಿ ನಿಗ್ರಹ ದಳದ ಸದಸ್ಯರು, ಕುಶಾಲ್ ಹಾಗೂ ಕೇಶವ್ ಅವರನ್ನು ಸಂಪರ್ಕಿಸಿದ್ದಾರೆ. ವ್ಯಾಪಾರ ಕುದುರಿದೆ. ಆನಂತರ ಇಬ್ಬರೂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
(ಏಜನ್ಸೀಸ್)
Comments
Story first published: Monday, March 12, 2007, 5:30 [IST]