ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರ ಭಾರತದಲ್ಲಿ ಮಳೆ--ಚಳಿ : ಜನಜೀವನ ಅಸ್ತವ್ಯಸ್ತ
ನವದೆಹಲಿ : ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕುಂಭ-ದ್ರೋಣ ಮಳೆ ಮತ್ತು ಸುರಿಯುವ ಮಂಜಿನಿಂದಾಗಿ ಜನಜೀವನ ಸೋಮವಾರ ಅಸ್ತವ್ಯಸ್ತಗೊಂಡಿದೆ.
ರಾಜಧಾನಿ ನಗರಿ ದೆಹಲಿಯಲ್ಲಿ 12 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಹೆಚ್ಚಿನ ಮಳೆಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಭಾನುವಾರ ರಾತ್ರಿಯಿಂದ ಹಿಮಪಾತ ಶುರುವಾಗಿದೆ. ಜೊತೆಗೆ ಮಳೆ ಬೀಳುತ್ತಿದೆ. ಶೀಮ್ಲಾದಲ್ಲಿ 20ಮಿ.ಮೀ ಮಳೆ ಸುರಿದಿದೆ. ಹವಾಮಾನ ವೈಫರಿತ್ಯದಿಂದ ಜಮ್ಮು-ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನದ ಮಾರ್ಗ ಅಸ್ತವ್ಯಸ್ತಗೊಂಡಿದೆ. ಶ್ರೀನಗರದಲ್ಲಿ ಸೋಮವಾರ ಬೆಳಗ್ಗೆ ಹೆಚ್ಚಿನ ಹಿಮಪಾತವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
(ಏಜನ್ಸೀಸ್)
Story first published: Monday, March 12, 2007, 5:30 [IST]