ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೇಂದ್ರೆ ಸ್ಫೂರ್ತಿ ತಾಣ ಸಾಧನಕೇರಿ ಅಭಿವೃದ್ಧಿಗೆ 2ಕೋಟಿ
ಧಾರವಾಡ : ಇಲ್ಲಿನ ಬಾರೋ ಸಾಧನಕೇರಿ ಉದ್ಯಾನ ವನ, ಸದ್ಯದಲ್ಲಿಯೇ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಗೊಳ್ಳಲಿದೆ. ಈ ಯೋಜನೆಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆ 2.46ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಈ ವಿಚಾರವನ್ನು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಖಚಿತಪಡಿಸಿದ್ದು, ಯೋಜನೆ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ವರಕವಿ ಬೇಂದ್ರೆ ಅವರಿಗೆ ಸ್ಫೂರ್ತಿ ನೀಡಿದ, ಬೇಂದ್ರೆ ಸುತ್ತಾಡಿದ ಸಾಧನಕೇರಿ ರಾಜ್ಯದ ಹೊಸ ಆಕರ್ಷಣೆಯಾಗಲಿದೆ.
ಯೋಜನೆಯ ಶೇ.80ರಷ್ಟು ಹಣವನ್ನು ಮೊದಲ ಹಂತದಲ್ಲೇ ಕೇಂದ್ರ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, March 11, 2007, 5:30 [IST]