ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮ ಸಂಕಟ : ಪತ್ರಕರ್ತ ಸೀತಾರಾಂ ಆಸ್ಪತ್ರೆಗೆ ದಾಖಲು

By Staff
|
Google Oneindia Kannada News

ಶಿವಮೊಗ್ಗ : ಜೈನ ಸಮುದಾಯವನ್ನು ಅವಹೇಳನ ಮಾಡುವ ವರದಿ ಪ್ರಕಟಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಪತ್ರಕರ್ತ ಬಿ.ವಿ.ಸೀತಾರಾಂ ಮತ್ತು ಅವರ ಪತ್ನಿ ರೋಹಿಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್‌ಕುಮಾರ್‌ ಜೈನ್‌ಅವರ ದೂರಿನನ್ವಯ, ‘ಕನ್ನಡ ಜನ ಅಂತರಂಗ’ ಮತ್ತು ‘ಕರಾವಳಿ ಅಲೆ’ ಪತ್ರಿಕೆಗಳನ್ನು ನಡೆಸುತ್ತಿರುವ ಈ ದಂಪತಿಗಳನ್ನು, ಪೊಲೀಸರು ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಬಂಧಿಸಿದ್ದರು. ಎದೆನೋವು ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದ ದಂಪತಿಗಳು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದಂಪತಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ(ಮಾ.12) ನಡೆಯಲಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡಿ, ಸೀತಾರಾಂ ಮತ್ತು ರೋಹಿಣಿ ಅವರನ್ನು ಹಿಂಸಿಸುತ್ತಿದ್ದಾರೆ ಎಂಬ ಹೋರಾಟಗಳು, ರಾಜ್ಯದಲ್ಲಿ ನಡೆದಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X