ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇವು ರಾಷ್ಟ್ರೀಯ ಹೆದ್ದಾರಿಗಳೋ, ಲಂಚದ ತಾಣಗಳೋ?
ಬಿಜಾಪುರ : ರಾಷ್ಟ್ರೀಯ ಹೆದ್ದಾರಿಗಳು ಹಣ ಹುಟ್ಟುವ ತಾಣಗಳು! ಲಂಚಕೋರ ಪೊಲೀಸರಿಗೆ ಹೆದ್ದಾರಿಯಲ್ಲಿ ನಿಲ್ಲೋದಂದ್ರೆ ಎಲ್ಲಿಲ್ಲದ ಉತ್ಸಾಹ! ಕೇವಲ ಐದು ಗಂಟೆಯಲ್ಲಿ ರಾ.ಹೆದ್ದಾರಿಯಾಂದರಲ್ಲಿ 79ಸಾವಿರ ರೂ. ಲಂಚ ಹಣ ಸಂಗ್ರಹವಾಗಿದೆ!
ಕರ್ನಾಟಕ-ಮಹಾರಾಷ್ಟ್ರ ನಡುವಿನ ಇಂಡಿ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-13ರಲ್ಲಿ, ಮೇಲೆ ಹೇಳಿದಷ್ಟು ಮೊತ್ತದ ಲಂಚ ಹಣ ಪತ್ತೆಯಾಗಿದೆ. ಲೋಕಾಯುಕ್ತರ ದಾಳಿ, ಭ್ರಷ್ಟತೆಯ ವಿರೂಪ ದರ್ಶನವನ್ನು ಜಗತ್ತಿಗೆ ತೋರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೋಟಾರು ವಾಹನ ನಿರೀಕ್ಷಕರಾದ ಕೃಷ್ಣಮೂರ್ತಿ ಮತ್ತು ನರಸಿಂಹಯ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಝಳಕಿ ಚೆಕ್ಪೋಸ್ಟ್ನಲ್ಲಿ ಪ್ರತಿದಿನ ಸುಮಾರು 2ಲಕ್ಷಕ್ಕೂ ಅಧಿಕ ಮೊತ್ತದ ಲಂಚದ ಹಣ ಸಂಗ್ರಹವಾಗುತ್ತದೆ. ವಾಹನ ಚಾಲಕರಿಂದ ಲಂಚ ಕೇಳುವ ಪೊಲೀಸರಿಗೆ ಕಡಿವಾಣ ಹಾಕಿ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದವು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, March 10, 2007, 5:30 [IST]