ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ಶಾಂತ : ಕಿರುತೆರೆಯಲ್ಲಿ ತಮಿಳು ಚಾನಲ್ ಪ್ರವಾಹ
ಬೆಂಗಳೂರು : ಕಾವೇರಿ ವಿವಾದದಿಂದ ಉಂಟಾಗಿದ್ದ ಉದ್ವಿಗ್ನ ವಾತಾವರಣದಿಂದ ಮರೆಯಾಗಿದ್ದ ತಮಿಳು ಟೀವಿ ವಾಹಿನಿಗಳು, ಮತ್ತೆ ರಾಜಧಾನಿಯಲ್ಲಿ ಪ್ರತ್ಯಕ್ಷವಾಗಿವೆ.
ಕಾವೇರಿ ನ್ಯಾಯಮಂಡಳಿ ತೀರ್ಪು ಹೊರಬಿದ್ದ ಸಂದರ್ಭದಲ್ಲಿ, ಕೇಬಲ್ ಆಪರೇಟರ್ಗಳು ಸ್ವಯಂಪ್ರೇರಿತರಾಗಿ ತಮಿಳು ವಾಹಿನಿಗಳ ಪ್ರಸಾರವನ್ನು ನಿಲ್ಲಿಸಿದ್ದರು. ತಮಿಳು ಸಂಘಗಳ ಒತ್ತಾಯ ಹಾಗೂ ತಮಿಳು ಪ್ರಭಾವಿತ ಪ್ರದೇಶದ ಜನರ ಒತ್ತಡದಿಂದ ಪ್ರಸಾರವನ್ನು ಈಗ ಪುನಃ ಆರಂಭಿಸಿದ್ದಾರೆ.
ಕಳೆದ ತಿಂಗಳು ಪ್ರಸಾರ ನಿಲ್ಲಿಸಿದ್ದು, ನಷ್ಟ ಆಗಿದೆ. ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮರ್ಫಿ ಟೌನ್, ಹಲಸೂರು, ಇಂದಿರಾನಗರ, ವಿವೇಕನಗರ ಹಾಗೂ ಶಿವಾಜಿನಗರದ ಗ್ರಾಹಕರು ತಿಂಗಳ ದರವನ್ನು ನೀಡಲು ನಿರಾಕರಿಸಿದರು. ಕೆಲವರಂತೂ, ಕೇಬಲ್ ತೆಗೆಸಿ, ಡಿಶ್ ನೆಟ್ ಹಾಕಿಸಿಕೊಳ್ಳುವುದಾಗಿ ಬೆದರಿಕೆವೊಡ್ಡಿದ್ದಾರೆ. ಗ್ರಾಹಕರ ಒತ್ತಾಯದ ಮೇರೆಗೆ ತಮಿಳು ವಾಹಿನಿಗಳ ಪ್ರಸಾರವನ್ನು ಪ್ರಾರಂಭಿಸಲೇಬೇಕಾಯಿತು ಎಂದು ಕರ್ನಾಟಕ ಕೇಬಲ್ ಆಪರೇಟರ್ಗಳ ಸಂಘ ಹೇಳಿಕೆ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, March 6, 2007, 5:30 [IST]