ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೆಡಿಎಸ್ ಜೊತೆ ಮೈತ್ರಿ ಬೇಡ, ಚುನಾವಣೆ ಬೇಕು -ಖರ್ಗೆ
ಬೆಂಗಳೂರು : ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ಕೈಜೋಡಿಸುವ ವಿಚಾರವನ್ನು ತಳ್ಳಿಹಾಕಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹೊಸ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದೇವೇಗೌಡರು ಸೋನಿಯಾರನ್ನು ಭೇಟಿಯಾಗಿ ಸರ್ಕಾರ ರಚನೆ ಸಂಬಂಧವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ. ಇದೆಲ್ಲವೂ ಸುಳ್ಳು, ಜೆಡಿಎಸ್ ಜೊತೆ ಸೇರಲು ನಾವು ಬಯಸುವುದಿಲ್ಲ ಎಂದರು.
ರಾಜ್ಯದಲ್ಲಿನ ಜೆಡಿಎಸ್-ಬಿಜೆಪಿ ನೇತೃತ್ವದ ದೋಸ್ತಿ ಸರ್ಕಾರ ಜನರನ್ನು ಗೊಂದಲಕ್ಕೆ ತಳ್ಳಿದೆ. ಲಾಟರಿ ನಿಷೇಧಿಸುವುದಾಗಿ ಉಪಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಲಾಟರಿ ಸಚಿವರು, ಇದು ಕಷ್ಟದ ಕೆಲಸ ಎನ್ನುತ್ತಿದ್ದಾರೆ. ಸಾರಾಯಿ ನಿಷೇಧ, ಸಾಲ ಮನ್ನ ವಿಚಾರಗಳಲ್ಲಿ ಸಹಾ ಗೊಂದಲಗಳಿವೆ. ಆಡಳಿತ ಯಂತ್ರದ ಹಳಿ ತಪ್ಪಿದೆ. ಇದು ಬಾಯಿಮಾತಿನ ಸರ್ಕಾರವಾಗಿದೆ ಎಂದು ಖರ್ಗೆ ಗೇಲಿ ಮಾಡಿದರು.
(ಯುಎನ್ಐ)
Comments
Story first published: Tuesday, March 6, 2007, 5:30 [IST]