ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಯಿ ನೆರಳು : 600ನಾಯಿಗಳ ಸೆರೆ, 6ಮಂದಿಗೆ ಕಡಿತ
ಬೆಂಗಳೂರು : ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ರಾಜಧಾನಿಯಲ್ಲಿ ಮಂಗಳವಾರವೂ ಮುಂದುವರೆದಿದೆ. ಈ ಮಧ್ಯೆ ಬೀದಿನಾಯಿಗಳು ಆರು ಮಂದಿಯನ್ನು ಕಚ್ಚಿದ ಪ್ರಕರಣಗಳೂ ವರದಿಯಾಗಿವೆ.
ದಿನಕ್ಕೆ ಕನಿಷ್ಠ ಸಾವಿರ ಬೀದಿ ನಾಯಿಗಳನ್ನು ಹಿಡಿಯುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ 600ಕ್ಕೂ ಅಧಿಕ ನಾಯಿಗಳನ್ನು ಸೆರೆಹಿಡಿಯಲಾಗಿದೆ.
ರಾತ್ರಿ ವೇಳೆಯೂ ಕಾರ್ಯಾಚರಣೆ ಮುಂದುವರೆದಿದ್ದು, ಮಾಂಸದಂಗಡಿ ಮತ್ತು ಬೀದಿ ಹೋಟೆಲ್ಗಳ ತೆರವುಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಶಿವಾಜಿನಗರ, ಸಂಜಯಗರ, ಕೋರಮಂಗಲ, ಬಸವನಗುಡಿ, ಗಾಂಧಿನಗರ, ಚಿಕ್ಕಪೇಟೆ, ಜೆ.ಪಿ.ನಗರ ಮತ್ತಿತರ ಪ್ರದೇಶಗಳಲ್ಲಿ 128ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, March 6, 2007, 5:30 [IST]