ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿ ನೆರಳು : 600ನಾಯಿಗಳ ಸೆರೆ, 6ಮಂದಿಗೆ ಕಡಿತ

By Staff
|
Google Oneindia Kannada News

ಬೆಂಗಳೂರು : ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ರಾಜಧಾನಿಯಲ್ಲಿ ಮಂಗಳವಾರವೂ ಮುಂದುವರೆದಿದೆ. ಈ ಮಧ್ಯೆ ಬೀದಿನಾಯಿಗಳು ಆರು ಮಂದಿಯನ್ನು ಕಚ್ಚಿದ ಪ್ರಕರಣಗಳೂ ವರದಿಯಾಗಿವೆ.

ದಿನಕ್ಕೆ ಕನಿಷ್ಠ ಸಾವಿರ ಬೀದಿ ನಾಯಿಗಳನ್ನು ಹಿಡಿಯುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ 600ಕ್ಕೂ ಅಧಿಕ ನಾಯಿಗಳನ್ನು ಸೆರೆಹಿಡಿಯಲಾಗಿದೆ.

ರಾತ್ರಿ ವೇಳೆಯೂ ಕಾರ್ಯಾಚರಣೆ ಮುಂದುವರೆದಿದ್ದು, ಮಾಂಸದಂಗಡಿ ಮತ್ತು ಬೀದಿ ಹೋಟೆಲ್‌ಗಳ ತೆರವುಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಶಿವಾಜಿನಗರ, ಸಂಜಯಗರ, ಕೋರಮಂಗಲ, ಬಸವನಗುಡಿ, ಗಾಂಧಿನಗರ, ಚಿಕ್ಕಪೇಟೆ, ಜೆ.ಪಿ.ನಗರ ಮತ್ತಿತರ ಪ್ರದೇಶಗಳಲ್ಲಿ 128ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X