ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಆರ್ಎಸ್ನ ಮುಳುಗಡೆ ದೇವಸ್ಥಾನ ಸ್ಥಳಾಂತರ
ಮೈಸೂರು : ಕೃಷ್ಣ ರಾಜ ಸಾಗರ(ಕೆಆರ್ಎಸ್) ಜಲಾಶಯದಲ್ಲಿ ರುವ 12ನೇ ಶತಮಾನದ ಶ್ರೀ ವೇಣುಗೋಪಾಲ ದೇವಸ್ಥಾನದಸ್ಥಳಾಂತರ ಕಾರ್ಯ ಹೆಚ್ಚು ಕಮ್ಮಿ ಪೂರ್ಣಗೊಂಡಿದೆ.
ಹೊಸಕನ್ನಂಬಾಡಿ ಹಳ್ಳಿಯ ಹಿನ್ನೀರಿನ ಪ್ರದೇಶದಲ್ಲಿ ಈ ದೇವಸ್ಥಾನಕ್ಕೆ ಸ್ಥಳ ಕಲ್ಪಿಸಲಾಗಿದೆ. ಖಾಸಗಿ ವಲಯದ ಖೋಡೆ ಪ್ರತಿಷ್ಠಾನದ ಸಹಾಯದಿಂದ ರಾಜ್ಯ ಸರ್ಕಾರ ದೇವಸ್ಥಾನ ಸ್ಥಳಾಂತರದ ಬೃಹತ್ ಯೋಜನೆಗೆ ಕೈ ಹಾಕಿತ್ತು. ಈಗ ಈ ಯೋಜನೆಯ ಶೇ. 80 ರಷ್ಟು ಪೂರ್ಣಗೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರವುಗೊಳಿಸಲಾಗುತ್ತದೆ.
ಚಾಲುಕ್ಯ ಹಾಗೂ ದ್ರಾವಿಡ ಶೈಲಿಯನ್ನು ಹೊಂದಿದ್ದ ವೇಣುಗೋಪಾಲ ದೇವಸ್ಥಾನಕ್ಕೆ, ಸರಿಯಾದ ರೂಪ ನೀಡಲು ತಂಜಾವೂರು, ಮಧುರೈ ಹಾಗೂ ಪಾಂಡೀಚೇರಿಯಿಂದ ಬಂದಿರುವ ಶಿಲ್ಪಿಗಳು ಹೆಣಗುತ್ತಿದ್ದಾರೆ.
(ಯುಎನ್ಐ)
Comments
Story first published: Sunday, March 4, 2007, 5:30 [IST]