ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಚ್ಎಂಟಿಯ ಅಧಿಕಾರಿಗಳ ಮೇಲೆ ಸಿಬಿಐ ಕೇಸ್
ಬೆಂಗಳೂರು : ಹಣ ದುರುಪಯೋಗದ ಆರೋಪದ ಮೇಲೆ ಹೆಚ್ಎಂಟಿ ಕಾರ್ಖಾನೆಯ ಹಿರಿಯ ಅಧಿಕಾರಿಗಳ ಮೇಲೆ ಸಿಬಿಐ ಮೊಕದ್ದಮೆ ಹೂಡಿದೆ.
ನಮೂದಿತ ಬೆಲೆಗಿಂತ ಅಧಿಕ ಹಣ ದಾಖಲಿಸಿ, ವಾಚ್ ಮಾರಾಟ ಮಾಡಿ , ಕಂಪೆನಿಗೆ ಸುಮಾರು 7 ಕೋಟಿ ರೂ. ವಂಚಿಸಿರುವ ಬಗ್ಗೆ ತನಿಖಾ ತಂಡ ಶಂಕೆ ವ್ಯಕ್ತಪಡಿಸಿದೆ. ಬೆಂಗಳೂರಿನ ಕಾಸ್ ಮಾಸ್ ಬ್ಯಾಂಕ್ ನಲ್ಲಿ ಈ ಅವ್ಯವಹಾರ ಬಯಲಿಗೆ ಬಂದಿದೆ. ಹಿಂದೂಸ್ಥಾನ್ ಮೆಷಿನ್ಟೂಲ್ಸ್(ಹೆಚ್ಎಂಟಿ)ಗೆ ಸೇರಿದ ಸುಮಾರು 11 ಜನ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ.
ಕೊಚ್ಚಿ, ಚೆನ್ನೈ, ಸ್ವಿಸ್ ಟೈಮ್ ಹೌಸ್ ಹಾಗೂ ಬೆಂಗಳೂರಿನ ಅಧಿಕಾರಿಗಳ ಮೇಲೆ ಈ ಸಂಬಂಧ ಸಿಬಿಐ ಮೊಕದ್ದಮೆ ದಾಖಲಿಸಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, March 4, 2007, 5:30 [IST]