ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಲ್ಸೆಂಟರ್ ತಾನಿಯಾಳ ಹತ್ಯೆ ಕೇಸು ಎಲ್ಲಿಗೆ ಬಂತು?
ಬೆಂಗಳೂರು : ಕಾಲ್ಸೆಂಟರ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಹತ್ಯೆಯ ಆರೋಪಿ ಕಿಶೋರ್ ಗುರುರಾಜ್ಗೆ, ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಕಿಶೋರ್ ಗುರುರಾಜ್ ಸಲ್ಲಿಸಿದ ಜಾಮೀನು ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ಆರೋಪಿ ವಿರುದ್ಧ ಗಂಭೀರ ಆರೋಪಗಳಿರುವ ಕಾರಣ ಜಾಮೀನು ನೀಡಲು ನಿರಾಕರಿಸಿದರು.
ಕಿಶೋರ್ ಗುರುರಾಜ್, ಪ್ರಿಯತಮೆ ತಾನಿಯಾ ಬ್ಯಾನರ್ಜಿಯನ್ನು ಹತ್ಯೆಮಾಡಿ ಶಿರಾಡಿ ಘಾಟ್ ಬಳಿ ಬಿಸಾಕಿ ಹೋದ ಪ್ರಕರಣ ಮಾರ್ಚ್ 18, 2006ರಲ್ಲಿ ನಡೆದಿತ್ತು. ಆನಂತರ ಕಿಶೋರ್ ಗುರುರಾಜ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, March 3, 2007, 5:30 [IST]