ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಾಯುಕ್ತರ ಅಧಿಕಾರ ಎತ್ತಿಹಿಡಿದ ರಾಜ್ಯ ಹೈಕೋರ್ಟ್
ಬೆಂಗಳೂರು : ತನಿಖೆ ನಡೆಸುವ ಸಂದರ್ಭದಲ್ಲಿ, ಲೋಕಾಯುಕ್ತ ಯಾವುದೇ ಅಧಿಕಾರಿ ಅಥವಾ ಏಜನ್ಸಿಯ ಸಹಾಯ ಪಡೆಯುವ ಅಧಿಕಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಡಾ.ಎಚ್.ಸುದರ್ಶನ್ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹುಲವಾಡಿ ಜಿ ರಮೇಶ್, ಪ್ರಕರಣ ಇತ್ಯರ್ಥಪಡಿಸಿ ಆಜ್ಞೆ ಹೊರಡಿಸಿದರು.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಹಾಗೂ ಇತರ ಮೂವರು, ವಿಶೇಷ ತನಿಖಾಧಿಕಾರಿಯಾಗಿ ಡಾ.ಸುದರ್ಶನ್ ಅವರನ್ನು ನೇಮಿಸಿದ್ದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ನೇಮಕ ಮಾಡಿದ ಲೋಕಾಯುಕ್ತರ ಕ್ರಮವನ್ನು ಪ್ರಶ್ನಿಸಿದ್ದರು.
ರಿಟ್ ಅರ್ಜಿ ಸಲ್ಲಿಸಿದವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ತನಿಖೆ ನಡೆಸಲಾಗಿತ್ತು. ಇವರ ವಿರುದ್ಧ ಡಾ.ಸುದರ್ಶನ್, ಜನವರಿ 31, 2002ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Story first published: Saturday, March 3, 2007, 5:30 [IST]