ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಡಂ ಭೇಟಿ ಸುಳ್ಳು, ರಾಷ್ಟ್ರಪತಿ ಹುದ್ದೆ ಬೇಡ -ಗೌಡ

By Staff
|
Google Oneindia Kannada News

ಬೆಂಗಳೂರು : ಜೆಡಿಎಸ್‌ ಅಧಿಕಾರಕ್ಕಾಗಿ ಕಾಂಗ್ರೆಸ್‌ ಜೊತೆ ಕೈಜೋಡಿಸುತ್ತದೆ ಎನ್ನುವ ವರದಿಗಳನ್ನು ತಳ್ಳಿಹಾಕಿರುವ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ಇದೆಲ್ಲವೂ ಸುಳ್ಳುಸುಳ್ಳುಸುಳ್ಳು ಎಂದು ಮೂರು ಸಲ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸೋನಿಯಾಗಾಂಧಿಯನ್ನು ಒಂದು ವರ್ಷದ ಹಿಂದೆ ನಾನು ಭೇಟಿ ಮಾಡಿದ್ದೆ. ಮಾಧ್ಯಮಗಳಲ್ಲಿ ಪ್ರಕಟವಾದಂತೆ ಸೋನಿಯಾ ಇರಲಿ, ಪ್ರಧಾನಿಯನ್ನೂ ಸಹಾ ಇತ್ತೀಚೆಗೆ ಭೇಟಿಯಾಗಿಲ್ಲ ಎಂದರು.

ರಾಜ್ಯದಲ್ಲಿನ ದೋಸ್ತಿ ಸರ್ಕಾರ ಪೂರ್ಣಾವಧಿ ಮುಗಿಸಲಿದೆ. ಒಪ್ಪಂದದಂತೆಯೇ ಬಿಜೆಪಿಗೆ 20ತಿಂಗಳ ಅಧಿಕಾರವನ್ನು ಬಿಟ್ಟುಕೊಡಲಾಗುತ್ತದೆ. ಎರಡೂ ಪಕ್ಷಗಳೂ ಜಾತ್ಯತೀತ ನೀತಿನಿಯಮಗಳಿಗೆ ಬದ್ಧವಾಗಿರುವ ತನಕ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾವೇರಿ ಸಮಸ್ಯೆ ಬಗ್ಗೆ ದೇವೇಗೌಡರು ತಲೆಕೆಡಿಸಿಕೊಳ್ಳುತ್ತಿಲ್ಲ... ರಾಷ್ಟ್ರಪತಿ ಹುದ್ದೆ ಮೇಲೆ ಕಣ್ಣಿಟ್ಟಿರುವ ದೇವೇಗೌಡರು ಮೌನ ವಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಣ್ಣೆ ಸ್ನಾನ ಮಾಡಿ ಒಂದು ದಿನ ಕೋಣೆಯಲ್ಲಿ ಮಲಗು ಅಂದ್ರೇ ನನಗೆ ಕಷ್ಟವಾಗುತ್ತದೆ. ಹೀಗಿರುವಾಗ ರಾಷ್ಟ್ರಪತಿ ಭವನದಲ್ಲಿ ಬಂಧಿಯಾಗಲು ಸಾಧ್ಯವೇ ಎಂದು ಮರು ಪ್ರಶ್ನಿಸಿದರು.

ಕಾವೇರಿ ಹೋರಾಟವನ್ನು ಬೀದಿ ಜಗಳ ಮಾಡಿದರೆ ಪ್ರಯೋಜನವಿಲ್ಲ. ಅಲ್ಲದೇ ಕಾವೇರಿ ನನ್ನ ಮನೆ ಸಮಸ್ಯೆ ಮಾತ್ರವೇನಲ್ಲ. ಪ್ರತಿಯಾಂದು ರಾಜಕೀಯ ಪಕ್ಷಕ್ಕೂ ಈ ವಿಚಾರದಲ್ಲಿ ಜವಾಬ್ದಾರಿಗಳಿವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಪೂರಕ ಸುದ್ದಿ -
ಯಡಿಯೂರಪ್ಪಗೆ ದೇವೇಗೌಡರಿಂದ ತಿರುಪತಿ ನಾಮ!?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X