ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇನ್ನೊಣಗಳ ತಂಟೆ : ಕೆಲಕಾಲ ಮೌನವಾದ ಹುಬ್ಬಳ್ಳಿ

By Staff
|
Google Oneindia Kannada News

ಹುಬ್ಬಳ್ಳಿ : ಸೋಮವಾರ(ಫೆಬ್ರವರಿ 26) ನಗರದ ಓಣೆಯಾಂದರಲ್ಲಿ ಜೇನ್ನೊಣಗಳು ಮುತ್ತಿಕೊಂಡ ಪರಿಣಾಮ, ಸಾಮಾನ್ಯ ಜನಜೀವನಕ್ಕೆ ಒಂದು ಗಂಟೆಗೂ ಹೆಚ್ಚುಕಾಲ ತೊಂದರೆ ಎದುರಾಯಿತು.

ಕೊಪ್ಪೀಕರ್‌ ರಸ್ತೆಯ ಕಟ್ಟಡವೊಂದರಿಂದ ದಿಢೀರನೇ ಹಾರಿಬಂದ ಜೇನ್ನೊಣಗಳು, ಓಣೆಯ ತುಂಬೆಲ್ಲ ಹರಡಿಕೊಂಡವು. ಇದರಿಂದ ಭೀತಿಗೊಳಗಾದ ಜನರು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡಿದರು. ತಮ್ಮ ದ್ವಿಚಕ್ರವಾಹನಗಳನ್ನೂ ರಸ್ತೆಯಲ್ಲೇ ತೊರೆದು ಜನ ಓಡಿ ಹೋದರು.

ಜೇನ್ನೊಣಗಳ ಆಕ್ರಮಣಕ್ಕೆ ಹೆದರಿ, ಬಹುತೇಕ ಅಂಗಡಿಕಾರರು ತಮ್ಮ ಅಂಗಡಿ ಬಾಗಿಲುಗಳನ್ನು ಮುಚ್ಚಿದರು. ಜೇನ್ನೊಣಗಳು ಜೇನುತಟ್ಟೆ ಸೇರಿಕೊಂಡ ನಂತರವೇ ಓಣೆ ಸಹಜ ಸ್ಥಿತಿಗೆ ಮರಳಿತು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X