ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇಂದ್ರ ರೈಲ್ವೆ ಬಜೆಟ್-07 : ಈ ಮಧ್ಯಾಹ್ನ ಲಾಲೂ ರೈಲು
ನವದೆಹಲಿ : ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್, ತಮ್ಮ ಅಧಿಕಾರವಧಿಯ ನಾಲ್ಕನೇ ಆಯವ್ಯಯ ಪತ್ರವನ್ನು ಸಂಸತ್ತಿನಲ್ಲಿ ಸೋಮವಾರ ಮಧ್ಯಾಹ್ನ ಮಂಡಿಸಲಿದ್ದಾರೆ.
ಗರೀಬ್ ರಥ್ ರೈಲುಗಳ ಹೆಚ್ಚಳ ಮತ್ತು ಪ್ರಯಾಣ ದರ ಹೆಚ್ಚಿಸದೇ, ಲಾಲೂ ಜನಪರ ಬಜೆಟ್ ಮಂಡಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಜುಲೈ 11ರಂದು ಮುಂಬೈ ರೈಲಿನಲ್ಲಿ, ಫೆ.18ರಂದು ಸಂಜೋತಾ ಎಕ್ಸ್ಪ್ರೆಸ್ನಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ಈ ಬೆನ್ನಲ್ಲಿ ಸುರಕ್ಷತೆಗಾಗಿ ಬಜೆಟ್ನಲ್ಲಿ ಒತ್ತು ನೀಡುವ ಸಾಧ್ಯತೆಗಳಿವೆ.
ಪ್ರತಿ ಸಲವೂ ಕೇಂದ್ರ ಸರ್ಕಾರ ಕರ್ನಾಟಕವನ್ನು ವಂಚಿಸುತ್ತಲೇ ಬಂದಿದೆ. ಈ ಸಲ ಲಾಲೂ, ಕರ್ನಾಟಕ್ಕೆ ಏನಾದರೂ ಕಾಣಿಕೆ ಕೊಡ್ತಾರಾ ಅನ್ನೋದು ಸದ್ಯದ ಕುತೂಹಲ.
(ಏಜನ್ಸೀಸ್)
Comments
Story first published: Monday, February 26, 2007, 5:30 [IST]