ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಲಾಂ ಒಲ್ಲೆ ಅನ್ನುತ್ತಿದ್ದಾರೆ... ಮುಂದ್ಯಾರೋ ರಾಷ್ಟ್ರಪತಿ?
ಗುಲ್ಬರ್ಗ : ಸುವರ್ಣ ಗ್ರಾಮೋದಯ ಯೋಜನೆ ಉದ್ಘಾಟನೆಯ ಸಲುವಾಗಿ ರಾಜ್ಯಕ್ಕೆ ಆಗಮಿಸಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಎರಡನೇ ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರೆಯಲು ಆಸಕ್ತಿಯಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಅಧಿಕಾರಕ್ಕೆ ಅಂಟಿಕೊಳ್ಳುವುದು ನನಗೆ ಇಷ್ಟವಿಲ್ಲ. ರಾಷ್ಟ್ರಪತಿಯಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ನಂತರದ ದಿನಗಳಲ್ಲಿ ಉಪನ್ಯಾಸಕನಾಗಿ ಮುಂದುವರೆಯುತ್ತೇನೆ. ವಿದ್ಯಾರ್ಥಿಗಳೊಂದಿಗೆ ಬೆರೆಯುವುದು ನನಗೆ ಇಷ್ಟ ಎಂದು ಕಲಾಂ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ನಾಲ್ಕು ತಿಂಗಳಲ್ಲಿ ರಾಷ್ಟ್ರಪತಿ ಅಧಿಕಾರವಧಿ ಮುಕ್ತಾಯವಾಗಲಿದ್ದು, ಮುಂದಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆ ಎದುರಾಗಿದೆ. ಎನ್ಡಿಎ ಮೈತ್ರಿಕೂಟ ಕಲಾಂರನ್ನು 2ನೇ ಅವಧಿಗೆ ಮುಂದುವರೆಸಲು ಉತ್ಸುಕವಾಗಿದೆ. ಮತ್ತೊಂದು ಕಡೆ ನಟ ಅಮಿತಾಭ್ ಸೇರಿದಂತೆ ಅನೇಕರ ಹೆಸರುಗಳು ಕೇಳಿ ಬರುತ್ತಿವೆ.
(ದಟ್ಸ್ ಕನ್ನಡ ವಾರ್ತೆ)
Story first published: Monday, February 26, 2007, 5:30 [IST]