ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಂಚದಾಸೆ : ಮೋಜಣಿದಾರನಿಗೆ 6ತಿಂಗಳುಗಳ ಕಠಿಣ ಶಿಕ್ಷೆ
ಬೆಂಗಳೂರು : ಲಂಚ ಸ್ವೀಕರಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ, ಬಾಗಲಕೋಟೆ ಜಿಲ್ಲೆಯ ಓರ್ವ ದ್ವಿತೀಯ ದರ್ಜೆ ಮೋಜಣಿದಾರ 6ತಿಂಗಳುಗಳ ಕಾಲ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ.
ಬಾಗಲಕೋಟೆ ತಾಲ್ಲೂಕು ಮೋಜಣಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶಾಂತಪ್ಪ ಮಹಾಂತಪ್ಪ ತಾರಿವಾಳ ಎಂಬುವವನಿಗೆ ಬಾಗಲಕೋಟೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ 25,000ರೂಪಾಯಿ ದಂಡವನ್ನೂ ವಿಧಿಸಿದೆ.
ಶಾಂತಪ್ಪ ಮಹಾಂತಪ್ಪ ತಾರಿವಾಳ ಖಾತಾ ಪ್ರಮಾಣಪತ್ರ ನೀಡಲು, ರಾಮಪ್ಪ ಹನುಮಪ್ಪ ಗಡಗಿ ಎಂಬಾತನಿಂದ ಸೆಪ್ಟೆಂಬರ್ 24, 2002ರಂದು 350 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ.
(ಏಜನ್ಸೀಸ್)
Comments
Story first published: Sunday, February 25, 2007, 5:30 [IST]