For Daily Alerts
ಕಥೆಗಾರ ‘ಕುಂ.ವೀ’ಗೆ ಗೌರೀಶ ಕಾಯ್ಕಿಣಿ ಸಾಹಿತ್ಯಕ ಪ್ರಶಸ್ತಿ
ಕಾರವಾರ : 2006ನೇ ಸಾಲಿನ ಗೌರೀಶ ಕಾಯ್ಕಿಣಿ ಸಾಹಿತ್ಯಕ ಪ್ರಶಸ್ತಿಗೆ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಆಯ್ಕೆಯಾಗಿದ್ದಾರೆ.
ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಕುಂ.ವೀರಭದ್ರಪ್ಪ ಅವರ ಸಮಗ್ರ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ವಿ.ಹೆಗಡೆ ತಿಳಿಸಿದ್ದಾರೆ.
ಬಿ.ಎ.ಸನದಿ, ಡಾ.ಎಂ.ಜಿ.ಹೆಗಡೆ, ಶ್ರೀಧರ ಬಳಗಾರ, ಪ್ರೊ.ಎಸ್.ಆರ್.ನಾರಾಯಣರಾವ್ ಅವರನ್ನೊಳಗೊಂಡ ಸಮಿತಿ ಕುಂ.ವೀ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ ತಿಂಗಳಲ್ಲಿ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)
Story first published: Sunday, February 25, 2007, 5:30 [IST]