ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರಿಗರ ಜಲ ಕ್ಷಾಮಕ್ಕೆ ಈ ಭಾನುವಾರ ತೆರೆ?
ಮಂಗಳೂರು : ಸಮುದ್ರ ನಗರಿಯಲ್ಲಿನ ನೀರಿನ ಸಮಸ್ಯೆ ಭಾನುವಾರ ನಿವಾರಣೆಯಾಗುವ ಸಾಧ್ಯತೆಗಳಿವೆ.
ನೀರು ಪೂರೈಸುವ ಪಂಪ್ಗಳ ದುರಸ್ತಿ ಕಾರ್ಯ ಅಂತಿಮ ಹಂತದಲ್ಲಿದ್ದು, ಭಾನುವಾರದ ಹೊತ್ತಿಗೆ ಕುಡಿಯುವ ನೀರಿನ ಪೂರೈಕೆ ಎಂದಿನಂತೆ ಆರಂಭಗೊಳ್ಳಲಿದೆ ಎಂದು ನಗರದ ಮೇಯರ್ ವಿಜಯಾ ಅರುಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಂಗಳೂರಿಗೆ ತುಂಬೆ ಅಣೆಕಟ್ಟೆಯಿಂದ ನೀರು ಪೂರೈಸಲಾಗುತ್ತಿದ್ದು, ತಾಂತ್ರಿಕ ದೋಷಗಳಿಂದಾಗಿ ಕಳೆದ ಐದಾರು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಆ ಪರಿಣಾಮ ನೀರಿನ ಬರ ಸೃಷ್ಟಿಯಾಗಿತ್ತು. ಟ್ಯಾಂಕರ್ಗಳಲ್ಲಿ ನೀರು ಪೂರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, February 24, 2007, 5:30 [IST]