ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರ ಬಸ್‌ ನಿಲ್ದಾಣ ತಾತ್ಕಾಲಿಕವಾಗಿ ಸ್ಥಳಾಂತರ

By Staff
|
Google Oneindia Kannada News

ಬೆಂಗಳೂರು : ಜಯನಗರ 4ನೇ ಬ್ಲಾಕ್‌ನಲ್ಲಿದ್ದ ಬೆಂಗಳೂರು ಮಹಾನಗರಪಾಲಿಕೆ ಬಸ್‌ ನಿಲ್ದಾಣ(ಬಿಎಂಟಿಸಿ)ವನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ಗುರುವಾರ(ಫೆ.22)ದಿಂದ ಈ ಬದಲಾವಣೆ ಜಾರಿಗೆ ಬರಲಿದೆ.

ಜಯನಗರ ಬಸ್‌ ನಿಲ್ದಾಣವನ್ನು ನವೀಕರಿಸಲು, ಕರ್ನಾಟಕ ಭೂ ಸೇನೆ ಕಾರ್ಯ ನಿರತವಾಗಿದೆ. ಹೀಗಾಗಿ 9ನೇ ಮುಖ್ಯರಸ್ತೆಯಲ್ಲಿನ ಆರ್‌. ವಿ. ನರ್ಸಿಂಗ್‌ ಕಾಲೇಜಿನ ರಸ್ತೆಯಿಂದ 30ನೇ ಅಡ್ಡರಸ್ತೆವರೆಗೂ ಬಸ್‌ಗಳನ್ನು ನಿಲ್ಲಿಸಲಾಗುತ್ತದೆ. ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಬೇಕೆಂದು ಪ್ರಕಟಣೆ ಕೋರಿದೆ.

ಬದಲಾದ ನಿಲ್ದಾಣಗಳು ಇಂತಿದೆ :

ಮೆಜೆಸ್ಟಿಕ್‌, ಶಿವಾಜಿನಗರ, ಕೆ.ಆರ್‌ .ಮಾರ್ಕೆಟ್‌ ಬಸ್‌ಗಾಗಿ 9ನೇ ಮುಖ್ಯ ರಸ್ತೆಯಲ್ಲಿನ ಜೈನ್‌ ಟೆಂಪಲ್‌ ಬಳಿ ನಿಲ್ಲಬೇಕು. ಜಯನಗರ 5ನೇ ಬ್ಲಾಕ್‌, ಜೆ.ಪಿ. ನಗರ 6ನೇ ಹಂತ, ಜಂಬೂಸವಾರಿ ದಿಣ್ಣೆ, ಬನಶಂಕರಿ, ಕುಮಾರಸ್ವಾಮಿ ಲೇಔಟ್‌ ಹಾಗೂ ಪದ್ಮನಾಭನಗರದ ಕಡೆಗೆ ಹೋಗುವ ಪ್ರಯಾಣಿಕರು 9ನೇ ಮುಖ್ಯರಸ್ತೆಯಲ್ಲಿನ ಈದ್ಗಾ ಮೈದಾನದ ಬಳಿ ನಿಲ್ಲಬೇಕು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X