ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರತ-ಪಾಕ್ ವಿದೇಶಾಂಗ ಸಚಿವರ ಮಹತ್ವದ ಮಾತುಕತೆ
ನವದೆಹಲಿ : ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರ ನೀಡಲು ಬದ್ಧ ಎಂದು ಭಾರತ ಮತ್ತು ಪಾಕಿಸ್ತಾನಗಳು ಬುಧವಾರ ಹೇಳಿವೆ. ಸಂಜೋತಾ ಎಕ್ಸ್ಪ್ರೆಸ್ ದುರಂತದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಖುರ್ಷೀದ್ ಮಹಮದ್ ಕಸೂರಿ ಬುಧವಾರ ನಗರದಲ್ಲಿ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ನಾಯಕರು, ಮಾರ್ಚ್ 6ರಂದು ನಡೆಯುವ ಭಯೋತ್ಪಾದನಾ ವಿರೋಧಿ ಜಂಟಿ ಸಭೆ ಅರ್ಥಪೂರ್ಣವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಭಾರತೀಯ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮಾತನಾಡಿ, ತನಿಖೆ ನಡೆಸುವುದು ಭಾರತದ ಜವಾಬ್ದಾರಿ. ಈ ಕುರಿತ ಮಾಹಿತಿಯನ್ನು ಭಯೋತ್ಪಾದನಾ ವಿರೋಧಿ ಜಂಟಿ ಸಭೆಯಲ್ಲಿ, ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಹೇಳಿದರು.
(ಏಜನ್ಸೀಸ್)
Comments
Story first published: Wednesday, February 21, 2007, 5:30 [IST]