ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಟರಿ ಲಕ್ಷ್ಮಿ ಅವಕೃಪೆ : ಭೀಮಾ ನದಿಗೆ ಜಿಗಿದ ದುರ್ದೈವಿ

By Staff
|
Google Oneindia Kannada News

ಕಲಬುರ್ಗಿ : ಆನ್‌ಲೈನ್‌ ಲಾಟರಿಯಲ್ಲಿ ಹಣ ಕಳೆದುಕೊಂಡ ಯುವಕನೋರ್ವ , ಭೀಮಾನದಿಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಲ್ಲಿಕಾರ್ಜುನ ಬಸಯ್ಯ ಮಠಪತಿ(25) ಎಂಬಾತ ಮೃತ ದುರ್ದೈವಿ. ಗೆಳೆಯನೊಬ್ಬನಿಂದ 20,000ರೂಪಾಯಿ ಸಾಲಪಡೆದು, ಆನ್‌ಲೈನ್‌ ಲಾಟರಿ ಆಡಿದ್ದಾನೆ. ಲಾಟರಿಯಲ್ಲಿ ಎಲ್ಲ ದುಡ್ಡು ಕಳೆದುಕೊಂಡಿದ್ದರಿಂದ, ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಸಾಲ ನೀಡಿದ ಗೆಳೆಯ ಮರುಪಾವತಿ ಮಾಡುವಂತೆ ಒತ್ತಾಯಿಸಿದಾಗ, ಮಲ್ಲಿಕಾರ್ಜುನಯ್ಯ ಗೆಳೆಯನಿಗೆ ಜೇವರ್ಗಿ ಪಟ್ಟಣಕ್ಕೆ ಬರುವಂತೆ ಹೇಳಿದ್ದಾನೆ. ಈ ಮಧ್ಯೆ ಆತನಿಗೆ ಹಣ ಮರುಪಾವತಿ ಸಾಧ್ಯವಾಗಿಲ್ಲ. ತನ್ನ ಭಾವಮೈದುನನ ಜೊತೆಯಲ್ಲಿ ನಗರಕ್ಕೆ ವಾಪಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಕಟ್ಟಾಸಾಂಘವಿ ಸೇತುವೆ ಬಳಿ ಬಸ್ಸಿನಿಂದ ಇಳಿದು ನದಿಗೆ ಹಾರಿದ ಎಂದು ಮೂಲಗಳು ತಿಳಿಸಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X