ವನಿತೆಯರ ಮಡಿಲಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ!
ಮಂಗಳೂರು : ಜಾತ್ಯತೀತ ಜನತಾದಳ ಅಭ್ಯರ್ಥಿ ರಾಜಶ್ರೀ.ಎಸ್.ಹೆಗಡೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನವನ್ನು ಮಹಿಳೆಯರೇ ಹೊಂದಿದ ಮೊದಲ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಪಾತ್ರವಾಗಿದೆ.
ಚುನಾವಣೆಯಲ್ಲಿ ಒಟ್ಟು 35 ಮತಗಳ ಪೈಕಿ ರಾಜಶ್ರೀ 18 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ, ಕಿನ್ನಿಗೋಳಿ ಮತಕ್ಷೇತ್ರದ ಪ್ರಮೋದ್ಕುಮಾರ್ 16 ಮತಪಡೆದು ಪರಾಭವ ಅನುಭವಿಸಿದರು. ಪ್ರಾದೇಶಿಕ ಆಯುಕ್ತ(ಮೈಸೂರು ವಿಭಾಗ) ಎ.ಎಸ್.ಶ್ರೀಕಾಂತ್ ಚುನಾವಣೆ ನಡೆಸಿದರು. ಸದಸ್ಯರು ಅಭ್ಯರ್ಥಿಪರ ಕೈ ಮೇಲೆತ್ತುವುದರ ಮೂಲಕ ಮತ ಚಲಾಯಿಸಿದರು.
ಉಪಾಧ್ಯಕ್ಷ ಸ್ಥಾನದಿಂದ ಧರಣೇಂದ್ರಕುಮಾರ್ ಉಚ್ಚಾಟನೆಗೊಂಡ ನಂತರ, ಫೆಬ್ರವರಿ 1ರಿಂದ ಈ ಸ್ಥಾನ ತೆರವುಗೊಂಡಿತ್ತು. ಸೆಪ್ಟೆಂಬರ್ 27ರವರೆಗೆ ರಾಜಶ್ರೀ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಮೂವರು ಜಾತ್ಯತೀತ ಜನತಾದಳ ಸದಸ್ಯರ ಬೆಂಬಲದೊಂದಿಗೆ, 15 ಸದಸ್ಯರ ಬಲವುಳ್ಳ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ.
(ದಟ್ಸ್ ಕನ್ನಡ ವಾರ್ತೆ)