ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಲ್ಬರ್ಗಕ್ಕೆ ರಾಷ್ಟ್ರಪತಿ : ಫೆ.25ರಂದು ಹಳ್ಳಿಗಳಿಗೆ ಬೆಳಕು
ಬೆಂಗಳೂರು : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗುವ ‘ಸುವರ್ಣ ಗ್ರಾಮೋದಯ’ ಯೋಜನೆಯನ್ನು ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಉದ್ಘಾಟಿಸಲಿದ್ದಾರೆ.
ಫೆ.25ರಂದು ಗುಲ್ಬರ್ಗ ಜಿಲ್ಲೆಯ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಯೋಜನೆಗೆ ರಾಷ್ಟ್ರಪತಿ ಚಾಲನೆ ನೀಡುವರು. ಪ್ರತಿ ವರ್ಷ ಸುಮಾರು ಸಾವಿರ ಹಳ್ಳಿಗಳನ್ನು ಯೋಜನೆಗಾಗಿ ಆಯ್ಕೆ ಮಾಡಿಕೊಂಡು, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಉದ್ದೇಶ ಸರ್ಕಾರದ್ದಾಗಿದೆ.
ವಿದ್ಯಾಭ್ಯಾಸ, ಮಾನವ ಸಂಪನ್ಮೂಲದ ಬಳಕೆ, ಆರೋಗ್ಯ ಸೇವೆ, ಉದ್ಯೋಗ ಸೃಷ್ಟಿ ಮತ್ತಿತರ ಅಂಶಗಳನ್ನು ಸುವರ್ಣ ಗ್ರಾಮೋದಯ ಯೋಜನೆ ಒಳಗೊಂಡಿದೆ. ಗ್ರಾಮಸ್ಥರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಯೋಜನೆ ಅನುಷ್ಠಾನಗೊಳ್ಳಲಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, February 20, 2007, 5:30 [IST]