ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರಪ್ಪನವರೊಂದಿಗೆ ಸಂವಾದ : ಓದುಗರಿಗಿಲ್ಲಿದೆ ಅಹ್ವಾನ

By Staff
|
Google Oneindia Kannada News

S.L. Bhairappaಬೆಂಗಳೂರು : ಅಭಿನಯ ಭಾರತಿ ಸಂಸ್ಥೆ, ಮಾರ್ಚ್‌ 4ರಂದು ಎಸ್‌.ಎಲ್‌.ಭೈರಪ್ಪನವರ ಇತ್ತೀಚಿನ ಕಾದಂಬರಿ ‘ಆವರಣ’ದ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕತ್ರಿಗುಪ್ಪೆಯ ಭಾರತಿ ಸಭಾಂಗಣದಲ್ಲಿ, ಸಂಜೆ 4.00ಗಂಟೆಗೆ ಆರಂಭವಾಗುವ ಸಂವಾದದಲ್ಲಿ ಸ್ವತಃ ಭೈರಪ್ಪನವರೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಆವರಣ ಕಾದಂಬರಿಯನ್ನು ಓದಿರಬೇಕು. ಅಲ್ಲದೆ ಮಧ್ಯಾಹ್ನ 3.45ರೊಳಗೆ ಸಭಾಂಗಣದಲ್ಲಿ ಹಾಜರಿರಬೇಕು.

ಸಭಾಂಗಣದಲ್ಲಿ 120 ಜನರಿಗೆ ಮಾತ್ರ ಸ್ಥಳಾವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ಇದೆ. ಆಸಕ್ತರು 50ರೂಪಾಯಿ ಕೊಟ್ಟು ಸ್ಥಳದಲ್ಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ಭಾರತಿ ಸಭಾಂಗಣ
ನಂ.30, 1ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ,
ಕೆಇಬಿ ಲೇಔಟ್‌, ಕತ್ರಿಗುಪ್ಪೆ,
ಬೆಂಗಳೂರು-85.

ಮೊಬೈಲ್‌ : 94480 87878, 94480 92904.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X