ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೈರಪ್ಪನವರೊಂದಿಗೆ ಸಂವಾದ : ಓದುಗರಿಗಿಲ್ಲಿದೆ ಅಹ್ವಾನ
ಬೆಂಗಳೂರು : ಅಭಿನಯ ಭಾರತಿ ಸಂಸ್ಥೆ, ಮಾರ್ಚ್ 4ರಂದು ಎಸ್.ಎಲ್.ಭೈರಪ್ಪನವರ ಇತ್ತೀಚಿನ ಕಾದಂಬರಿ ‘ಆವರಣ’ದ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕತ್ರಿಗುಪ್ಪೆಯ ಭಾರತಿ ಸಭಾಂಗಣದಲ್ಲಿ, ಸಂಜೆ 4.00ಗಂಟೆಗೆ ಆರಂಭವಾಗುವ ಸಂವಾದದಲ್ಲಿ ಸ್ವತಃ ಭೈರಪ್ಪನವರೂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಆವರಣ ಕಾದಂಬರಿಯನ್ನು ಓದಿರಬೇಕು. ಅಲ್ಲದೆ ಮಧ್ಯಾಹ್ನ 3.45ರೊಳಗೆ ಸಭಾಂಗಣದಲ್ಲಿ ಹಾಜರಿರಬೇಕು.
ಸಭಾಂಗಣದಲ್ಲಿ 120 ಜನರಿಗೆ ಮಾತ್ರ ಸ್ಥಳಾವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ಇದೆ. ಆಸಕ್ತರು 50ರೂಪಾಯಿ ಕೊಟ್ಟು ಸ್ಥಳದಲ್ಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಭಾರತಿ
ಸಭಾಂಗಣ
ನಂ.30,
1ನೇ
ಅಡ್ಡರಸ್ತೆ,
3ನೇ
ಮುಖ್ಯರಸ್ತೆ,
ಕೆಇಬಿ
ಲೇಔಟ್,
ಕತ್ರಿಗುಪ್ಪೆ,
ಬೆಂಗಳೂರು-85.
ಮೊಬೈಲ್ : 94480 87878, 94480 92904.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, February 20, 2007, 5:30 [IST]