ಉಗ್ರರ ಹುನ್ನಾರಕ್ಕೆ 66 ಬಲಿ, ಮೃತರ ಕುಟುಂಬಕ್ಕೆ 10 ಲಕ್ಷ
ನವದೆಹಲಿ : ಸಮ್ಜೋತಾ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ, ತಲಾ 10ಲಕ್ಷ ರೂ.ಗಳ ಪರಿಹಾರ ಧನವನ್ನು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಸೋಮವಾರ ಪ್ರಕಟಿಸಿದ್ದಾರೆ.
ಪಾಣಿಪತ್ನ ಭೀಮ್ಸೇನ್ ಸಂಚಾರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು, ಈ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿದರು.
ದುರಂತದ ವಿವರ : ದಿವಾನಾ ಬಳಿ ನವದೆಹಲಿ-ಸಮ್ಜೋತಾ ಎಕ್ಸ್ಪ್ರೆಸ್ನಲ್ಲಿ ಬಾಂಬ್ ಸ್ಫೋಟಿಸಿದೆ. ಉಗ್ರಗಾಮಿಗಳು ಭಾನುವಾರ ಮಧ್ಯರಾತ್ರಿ ನಡೆಸಿದ, ಈ ಕುಕೃತ್ಯದಲ್ಲಿ 66ಮಂದಿ ಮೃತಪಟ್ಟಿದ್ದು, 13ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟದ ಪರಿಣಾಮ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಬಿದ್ದು, ಅನಾಹುತ ನಡೆದಿದೆ. ರೈಲಿನಲ್ಲಿದ್ದ ಅನೇಕ ಮಂದಿ ನಿದ್ರೆಯಲ್ಲಿದ್ದರು. ಕೆಲವು ಪ್ರಯಾಣಿಕರು ರೈಲಿನಿಂದ ಹೊರಜಿಗಿದು, ಪ್ರಾಣ ಉಳಿಸಿಕೊಂಡಿದ್ದಾರೆ.
ಮೃತರಲ್ಲಿ ಬಹುತೇಕರು ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ. ಈ ರೈಲಿನಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ನಾಗರಿಕರು ಮರಳುತ್ತಿದ್ದರು. ಪಾಕ್ ಮತ್ತು ಭಾರತ ನಡುವಿನ ಸಾಮರಸ್ಯ ಕೆಡಿಸಲು, ಉಗ್ರರು ಈ ಹುನ್ನಾರ ನಡೆಸಿದ್ದಾರೆ ಎನ್ನಲಾಗಿದೆ.
(ಯುಎನ್ಐ)