ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಭಯೋತ್ಪಾದನಾ ನಿಗ್ರಹ ದಳ ರಚನೆ: ಗೃಹ ಮಂತ್ರಿ

By Staff
|
Google Oneindia Kannada News

ಧಾರವಾಡ : ಭಯೋತ್ಪಾದನೆಯ ಸಮಸ್ಯೆಯನ್ನು ಹತ್ತಿಕ್ಕಲು ರಾಜ್ಯದಲ್ಲಿ ಭಯೋತ್ಪಾದನಾ ನಿಗ್ರಹ ದಳವನ್ನು ಸ್ಥಾಪಿಸಲಾಗುವುದು ಎಂದು ಗೃಹ ಮಂತ್ರಿ ಎಂ.ಪಿ. ಪ್ರಕಾಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ , ಭಯೋತ್ಪಾದನೆ ಹಾಗೂ ಲ್ಯಾಂಡ್‌ ಮಾಫಿಯಾವನ್ನು ತಡೆಗಟ್ಟಲು ಪ್ರತ್ಯೇಕ ನಿಗ್ರಹ ದಳ ರಚನೆಯ ಬಗ್ಗೆ ಕೇಂದ್ರ ಗೃಹ ಮಂತ್ರಿ ಶಿವರಾಜ್‌ ಪಾಟೀಲ್‌ ಅವರೊಡನೆ ಚರ್ಚಿಸಿರುವುದಾಗಿ ಹೇಳಿದರು.

ಲ್ಯಾಂಡ್‌ ಮಾಫಿಯಾದಲ್ಲಿ ತೊಡಗಿರುವ ಭೂಗತ ದೊರೆಗಳನ್ನು ಹಿಡಿಯಲು ಅಗತ್ಯ ಬಿದ್ದರೆ ಅಂತರರಾಷ್ಟ್ರೀಯ ಪೊಲೀಸ್‌ ಹಾಗೂ ಇಂಟರ್‌ ಪೋಲ್‌ ನೆರವು ಕೇಳಲಾಗುವುದು. ಧಾರವಾಡದ ವಾಲ್ಮಿ ಯಲ್ಲಿ ಹೈಕೋರ್ಟ್‌ ಮುಂದಿನ ಫೆಬ್ರವರಿಯಾಳಗೆ ಸ್ಥಾಪನೆಯಾಗಲಿದೆ ಎಂದು ಎಂ.ಪಿ. ಪ್ರಕಾಶ್‌ ಹೇಳಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X