ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳ ಬಾಹುಬಲಿ ಮೂರ್ತಿಗೆ ಕಾವೇರಿ ಜಲಾಭಿಷೇಕ

By Staff
|
Google Oneindia Kannada News

ಬೆಳ್ತಂಗಡಿ : ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಗೆ ಹಾಗೂ ರತ್ನಗಿರಿಯ ಶ್ರೀ ಬಾಹುಬಲಿ ಸ್ವಾಮಿಗೆ ಕಾವೇರಿ ನದಿಯ ಜಲಾಭಿಷೇಕ ಭಾನುವಾರ(ಫೆ.18)ದಂದು ಮಾಡಲಾಯಿತು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ವತಿಯಿಂದ ನಡೆದ 1008 ಕಲಶಗಳ ಮಸ್ತ ಕಾಭಿಷೇಕದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾವೇರಿ ನ್ಯಾಯ ಮಂಡಳಿಯ ತೀರ್ಪು ವಿರೋಧಿಸಿ ನಾಡಿನ ಜನತೆ ನಡೆಸುತ್ತಿರುವ ಪ್ರತಿಭಟನೆ ಹಾಗೂ ಸರ್ಕಾರದ ಕಾನೂನು ಸಮರಕ್ಕೆ ಯಶಸ್ಸು ದೊರಕಲೆಂದು ಅವರು ನಾಡಿನ ಜನತೆಯ ಪರವಾಗಿ ಪ್ರಾರ್ಥಿಸಿದರು.

ಮೈಸೂರಿನ ಸಂಸದ ಸಿ.ಎಚ್‌. ವಿಜಯಶಂಕರ್‌, ಶಾಸಕ ಹರೀಶ್‌, ಬೆಳ್ತಂಗಡಿ ಶಾಸಕ ಕೆ. ಪ್ರಭಾಕರ್‌ ಬಂಗೇರ ಹಾಗೂ ವಿಧಾನ ಪರಿಷತ್‌ ಸದಸ್ಯೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X