ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಕಾಶವಾಣಿ : ಭಾನುವಾರ ಕೈಲಾಸಂ ಮಾತನ್ನು ಆಲಿಸಿರಿ..
ಬೆಂಗಳೂರು : ಆಕಾಶವಾಣಿಯಲ್ಲಿ ಮೂಡಿಬರುತ್ತಿರುವ ಕನ್ನಡದ ಕಣ್ಮಣಿಗಳು ಧಾರಾವಾಹಿಯಲ್ಲಿ, ಟಿ.ಪಿ.ಕೈಲಾಸಂ ಬಗ್ಗೆ ಭಾನುವಾರ ಬೆಳಗ್ಗೆ 8.40ರಿಂದ 9.10ರವರೆಗೆ ಕಾರ್ಯಕ್ರಮ ಮೂಡಿಬರಲಿದೆ.
ಹಾಸ್ಯ ಪಿತಾಮಹ ಕೈಲಾಸಂ ಶೀರ್ಷಿಕೆಯಡಿಯಲ್ಲಿ ಮೂಡಿಬರಲಿರುವ ಕಾರ್ಯಕ್ರಮದಲ್ಲಿ, ಕೈಲಾಸಂ ಅವರ ಧ್ವನಿಮುದ್ರಿಕೆಯನ್ನು ಪ್ರಸಾರ ಮಾಡಲಾಗುತ್ತದೆ. ಕೈಲಾಸಂ ವಾಕ್ಚಾತುರ್ಯ ಹೇಗಿತ್ತು ಎಂಬುದನ್ನು ಕೇಳುಗರು ಆಲಿಸಬಹುದು. ಬಿ.ಎಸ್.ಕೇಶವ ರಾವ್ ಮತ್ತು ರಂಗನಾಥ ರಾವ್ ಅವರುಗಳು ಕೈಲಾಸಂರನ್ನು ಪರಿಚಯಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, February 17, 2007, 5:30 [IST]