ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅನ್ನದಾತನ ವಿಷ್ಯ ಬಿಡಿ, ಐಟಿ ಜನ ಹೇಗಿದ್ದಾರೆ? -ಪಿ.ಎಂ.
ನವದೆಹಲಿ : ಕಾವೇರಿ ನ್ಯಾಯಮಂಡಲಿ ತೀರ್ಪಿನಿಂದ ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಳಕಳಿ-ಕಳವಳಕ್ಕಿಂತಲೂ, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ, ಐಟಿ ಬಗೆಗಿನ ಕಳಕಳಿ-ಕಳವಳವೇ ಹೆಚ್ಚು!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ನಡೆದ ಮಾತುಕತೆ ಸಂದರ್ಭದಲ್ಲಿ, ಕಾವೇರಿ ಸಂಬಂಧಿ ಹೋರಾಟದಿಂದ ಬೆಂಗಳೂರಿನ ಐಟಿ ಉದ್ಯಮದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಪ್ರಧಾನಿ ಆತಂಕ ವ್ಯಕ್ತಪಡಿಸಿದರು. ಐಟಿ ಮಂದಿಯ ಮನಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದರು.
ಈ ಬಗ್ಗೆ ವಿವರಣೆ ನೀಡಿದ ಕುಮಾರಸ್ವಾಮಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಐಟಿ ಉದ್ಯಮಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಕಲ್ಪಿಸುತ್ತಿದೆ ಎಂದು ಹೇಳಿದರು.
(ಏಜನ್ಸೀಸ್)
Story first published: Thursday, February 15, 2007, 5:30 [IST]