ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ಕುಂಚಬ್ರಹ್ಮರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್‌ ಸೇರಿದಂತೆ ಮೂವರು ಸಾಧಕರು, 2006ನೇ ಸಾಲಿನ ಲಲಿತಕಲಾ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತೈಲವರ್ಣ ಚಿತ್ರಕ್ಕೆ ಖ್ಯಾತವಾಗಿರುವ ಹಾಸನ ಜಿಲ್ಲೆಯ ಕೆ.ಟಿ.ಶಿವಪ್ರಸಾದ್‌, ಅಣುಶಕ್ತಿಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು, 100ಅಡಿಗಳ ಬೃಹತ್‌ ಚಿತ್ರ ಬಿಡಿಸಿದ ಹಾವೇರಿ ಜಿಲ್ಲೆಯ ಟಿ.ಬಿ.ಸೊಲಬಕ್ಕನವರ್‌ ಹಾಗೂ ತಮ್ಮ ಚಿತ್ರಗಳ ಮೂಲಕ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಿರುವ ಬೆಂಗಳೂರಿನ ಎಚ್‌.ಎನ್‌.ಸುರೇಶ್‌ ಈ ಪ್ರಶಸ್ತಿಗಳಿಗೆ ಆಯ್ಕೆಯಾದವರು.

ಮಾರ್ಚ್‌ ತಿಂಗಳಲ್ಲಿ ಗುಲ್ಬರ್ಗದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ 10,000 ರೂಪಾಯಿ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X