ಯಶವಂತಪುರ ಸೇರಿದಂತೆ ವಿವಿಧೆಡೆ ರೈಲಿಗೆ ರೆಡ್ ಸಿಗ್ನಲ್!
ಬೆಂಗಳೂರು : ಕಾವೇರಿ ತೀರ್ಪು ವಿರೋಧಿಸಿ ಕರೆ ನೀಡಲಾಗಿರುವ 12ಗಂಟೆಗಳ ಸೋಮವಾರದ ಕರ್ನಾಟಕ ಬಂದ್ಗೆ, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಗೆ ಮುಂದಾದ ಕರ್ನಾಟಕ ರಕ್ಷಣಾವೇದಿಕೆಯ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿತರ ವೇದಿಕೆ ಸದಸ್ಯರನ್ನು ವಿಮಾನ ನಿಲ್ದಾಣದ ಆವರಣದಿಂದ ಹೊರ ಕಳುಹಿಸಲಾಯಿತು. ನಗರದ ಯಶವಂತಪುರ ರೈಲ್ವೆ ಸ್ಟೇಷನ್ನಲ್ಲಿ ಕೆಲ ರೈಲುಗಳನ್ನ ಪ್ರತಿಭಟನಾಕಾರರು ತಡೆದಿದ್ದಾರೆ. ಇದೇ ರೀತಿಯ ಘಟನೆಗಳು ಚನ್ನಪಟ್ಟಣ, ಹೊಸಪೇಟೆಯಲ್ಲಿ ನಡೆದಿವೆ.
ಕೆಲವು ವಾಯುಯಾನ ಸಂಸ್ಥೆಗಳು ಬೆಳಗ್ಗಿನ ತಮ್ಮ ಸೇವೆಯನ್ನು ಸಂಜೆಗೆ ಬದಲಾಯಿಸಿಕೊಂಡಿವೆ. ಬೆಂಗಳೂರಿನಿಂದ ಹೊರಡುವ ರೈಲು ಮತ್ತು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ.
ಕೇಂದ್ರ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹಾಜರಾತಿ ಗಣನೀಯವಾಗಿ ಕುಸಿದಿದೆ. ಇನ್ಫೋಸಿಸ್, ವಿಪ್ರೊ ಸೇರಿದಂತೆ ವಿವಿಧ ಐಟಿ ಕಂಪನಿಗಳ ರಜೆ ಘೋಷಿಸಿವೆ. ಸಿನಿಮಾ ಮಂದಿರಗಳು ಪ್ರದರ್ಶನವನ್ನು, ವರ್ತಕರು ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)