ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಧಿವೇಶನ ನಡೆಸಲು ಮುಂದಾಗಿದ್ದ ಸಿ.ಎಂ.ಗೆ ಮುಖಭಂಗ
ಬೆಂಗಳೂರು : ಕರ್ನಾಟಕ ಬಂದ್ ಬೆಂಬಲಿಸಿ, ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸೋಮವಾರ ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಕೋರಂ ಕೊರತೆಯಿಂದ ಅಧಿವೇಶನ ನಡೆಸುವ ಉತ್ಸಾಹದಲ್ಲಿದ್ದ ಸರ್ಕಾರಕ್ಕೆ ಇರುಸುಮುರುಸಾಗಿದೆ.
ಬಂದ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ಹೇಳಿದೆ. ಮತ್ತೊಂದು ಕಡೆ ದೋಸ್ತಿ ಸರ್ಕಾರದ ಪಾಲುದಾರ ಪಕ್ಷವಾದ ಬಿಜೆಪಿ ಸಹಾ, ಬಂದ್ ಬೆಂಬಲಿಸಿದೆ.
ಕರ್ನಾಟಕ ಬಂದ್ ದಿನ ಅಧಿವೇಶನ ನಡೆಸಲು ಮುಂದಾದ ಸರ್ಕಾರ ಧೋರಣೆಯನ್ನು ಶಾಸಕ ವಾಟಾಳ್ ನಾಗರಾಜ್ ಸೇರಿದಂತೆ ಅನೇಕರು ಕಟುವಾಗಿ ಟೀಕಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, February 12, 2007, 5:30 [IST]