ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂದ್ ಮುಂಜಾನೆ ರಾಜಧಾನಿ ನಗರಿಯಲ್ಲಿ ಕಂಡದ್ದು...
ಬೆಂಗಳೂರು : ರಸ್ತೆಗಳೆಲ್ಲವೂ ಖಾಲಿಖಾಲಿ... ಅಂಗಡಿ ಮುಂಗಟ್ಟುಗಳಿಗೆ ಬೀಗ... ಕಾಫಿ ಕುಡಿಯಲು ಸಹಾ ಆಸ್ಪದವಿಲ್ಲದಂತೆ ಸಣ್ಣಪುಟ್ಟ ಹೋಟೆಲ್ಗಳಿಗೂ ಬೀಗ... ಅಲ್ಲಲ್ಲಿ ಪೇಪರ್ ಹಾಕುವ ಹುಡುಗರು...
ಅಲ್ಲೊಬ್ಬ ಇಲ್ಲೊಬ್ಬ ವಾಯುವಿಹಾರಿ... ‘ಯಾವ ಜನ್ಮದ ಕರ್ಮವೋ, ನಮಗಂತೂ ಮುಕ್ತಿಯಿಲ್ಲ’ ಎನ್ನುವ ಮುಖಭಾವದೊಂದಿಗೆರಸ್ತೆಗಳಲ್ಲಿ ಲಾಠಿ ಮತ್ತು ಗನ್ ಹೊತ್ತು ನಿಂತ ಪೊಲೀಸರು... -ಇವು ಬಂದ್ ದಿನವಾದ ಸೋಮವಾರ ಮುಂಜಾನೆ ಕಂಡ ದೃಶ್ಯಗಳು.
ಬಿಎಂಟಿಸಿ ಬಸ್ಗಳು ಮತ್ತು ಆಟೋಗಳು ರಸ್ತೆಗಿಳಿಯದ ಕಾರಣ, ತುರ್ತು ಕೆಲಸವಿದ್ದವರು ರಸ್ತೆಯಲ್ಲಿ ಪರದಾಡುತ್ತಿದ್ದರು. ತಡವಾದರೆ ಹಾಲು-ಮೊಸರು ಎಲ್ಲಿ ಮಿಸ್ ಹಾಕುವುದೋ ಎಂದು ಬೆಳಗ್ಗೆಬೆಳಗ್ಗೆಯೇ ಹಾಲು-ತರಕಾರಿ ಖರೀದಿಸುವ ಆತುರತೆಯನ್ನು ಸಾರ್ವಜನಿಕರು ಪ್ರದರ್ಶಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, February 12, 2007, 5:30 [IST]