ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ದೂರಿನಲ್ಲಿ ಹಿಂದೂ ಧ್ವಜಕ್ಕೆ ಬೆಂಕಿ; ಪರಿಸ್ಥಿತಿ ಉದ್ವಿಗ್ನ

By Staff
|
Google Oneindia Kannada News

ಮಂಡ್ಯ : ಜಿಲ್ಲೆಯ ಮದ್ದೂರಿನಲ್ಲಿ ಕೋಮು ಸಂಘರ್ಷದಿಂದಾಗಿ ಸೋಮವಾರ ಹಿಂಸಾಚಾರ ನಡೆದಿದೆ.

ಹಿಂದೂ ಸಮಾಜೋತ್ಸವದ ಹಿನ್ನೆಲೆ ಹಾರಿಸಲಾಗಿದ್ದ ಧ್ವಜಕ್ಕೆ ಕಿಡಿಗೇಡಿಗಳು ಬೆಂಕಿಹಚ್ಚಿದ್ದು, ಎರಡು ಕೋಮುಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಗುಂಪು ಚದುರಿಸಿ, ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ಮಾಡಿದರು.

ಘಟನೆ ಬಗ್ಗೆ ಡಿಜಿಪಿ ಶಂಕರಬಿದರಿ ಮಾಹಿತಿ ನೀಡಿದ್ದು, ಮದ್ದೂರಿನಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144ನ್ನು ಜಾರಿಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 25ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಧ್ವಜವನ್ನು ಸುಟ್ಟ ಘಟನೆಯಿಂದ ಕೆರಳಿದ ಸಾವಿರಾರು ಸಾರ್ವಜನಿಕರು, ಮಾಜಿ ಶಾಸಕ ಎಂ.ಎಸ್‌.ಸಿದ್ದರಾಜು ನೇತೃತ್ವದಲ್ಲಿ ಮೆರವಣಿಗೆ ನಡೆಸಿದಾಗ, ಹಿಂಸಾಚಾರ ನಡೆದಿದೆ. ಧ್ವಜವನ್ನು ಮತ್ತೆ ಹಾರಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತಗೊಂಡಿದೆ ಎನ್ನಲಾಗಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X