ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಸಾರ್ಟಿಸಿಗೀಗ ಶುಕ್ರದೆಸೆ : ಪ್ರಯಾಣಿಕರ ಪಾಲಿಗೆ?!

By Staff
|
Google Oneindia Kannada News

ಬೆಂಗಳೂರು : ನಷ್ಟ ನಷ್ಟ ನಷ್ಟ ಎನ್ನುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಈಗ ಲಾಭದಲ್ಲಿದೆ. ಒಂದಲ್ಲ, ಎರಡಲ್ಲ 27ಕೋಟಿ ರೂಪಾಯಿ ಲಾಭವನ್ನು ಮಡಿಲಿಗೆ ಹಾಕಿಕೊಂಡಿದೆ.

ಪ್ರಸಕ್ತ ಆರ್ಥಿಕವರ್ಷದಲ್ಲಿ 50ಕೋಟಿ ರೂ. ಲಾಭವನ್ನು ನಿರೀಕ್ಷಿಸಲಾಗಿದೆ. ಫೆ.6ರವರೆಗಿನ ಸಂಸ್ಥೆಯ ವಹಿವಾಟು ಸಾವಿರ ಕೋಟಿ ತಲುಪಿದೆ. ಈಶಾನ್ಯ ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳು ಮೊದಲ ಬಾರಿಗೆ ಲಾಭದಲ್ಲಿವೆ ಎಂದು ಸುದ್ದಿಗಾರರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪಿ.ಜೋಷಿ ತಿಳಿಸಿದ್ದಾರೆ.

ಉತ್ತಮ ಸೇವೆ ಮತ್ತು ಲಾಭದ ಮೂಲಕ ದೇಶದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿರುವ ಕೆಎಸ್‌ಆರ್‌ಟಿಸಿಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವ ಎನ್‌.ಚೆಲುವರಾಯ ಸ್ವಾಮಿ ಅಭಿನಂದಿಸಿದ್ದಾರೆ.

ಸಂಸ್ಥೆಯು 150 ವೋಲ್ವೊ ಮತ್ತು 5900 ಇತರೆ ಬ್ರ್ಯಾಂಡ್‌ ಬಸ್‌ಗಳನ್ನು ಹೊಂದಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X