For Daily Alerts
ಬೀದರ್ ಜಿಲ್ಲೆಯಲ್ಲಿ ಕೋಮು ಗಲಭೆ; ಒಬ್ಬನಿಗೆ ಗುಂಡು
ಬೀದರ್ : ಜಿಲ್ಲೆಯ ಹುಮ್ನಬಾದ್ನಲ್ಲಿ ನಡೆದ ಗುಂಪು ಘರ್ಷಣೆಯನ್ನು ಚದುರಿಸಲು ಪೊಲೀಸರು ಹಾರಿಸಿದ ಗುಂಡು ತಗುಲಿ, 23ವರ್ಷದ ಯುವಕ ಶನಿವಾರ ಗಾಯಗೊಂಡಿದ್ದಾನೆ.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ.ದೌಲಾ ಘಟನೆ ಬಗ್ಗೆ ವಿವರ ನೀಡಿದ್ದು, ಎರಡು ಸಮುದಾಯದ ಗುಂಪುಗಳ ನಡುವಿನ ಗಲಾಟೆಯಿಂದ ಹಿಂಸಾಚಾರ ನಡೆದಿದೆ. ಗುಂಪು ಚದುರಿಸಲು ಗುಂಡು ಹಾರಿಸುವುದು ಅನಿವಾರ್ಯವಾಯಿತು ಎಂದಿದ್ದಾರೆ.
ಗಾಯಾಳುವನ್ನು ಹೈದರಾಬಾದ್ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. 10ಮಂದಿ ಪೊಲೀಸರು ಸೇರಿದಂತೆ 25 ಮಂದಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ 29ಮಂದಿಯನ್ನು ಬಂಧಿಸಲಾಗಿದೆ. ನಗರದಲ್ಲಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.
ಘರ್ಷಣೆಗೆ
ಕಾರಣವೇನು?
:
ಶನಿವಾರ
ಬೆಳಗ್ಗೆ
ಆಟೋದಲ್ಲಿದ್ದ
ಟೇಪ್
ರೆಕಾರ್ಡರನ್ನು
ಆಫ್
ಮಾಡಲು
ಒಬ್ಬಾತ
ಕೇಳಿದ್ದಾನೆ.
ಆಟೋ
ಚಾಲಕ
ನಿರಾಕರಿಸಿದಾಗ
ಘರ್ಷಣೆ
ನಡೆದಿದೆ.
ನಂತರ
ಇದು
ಕೋಮು
ಘರ್ಷಣೆಯಾಗಿ
ಮಾರ್ಪಟ್ಟು,
ನಗರದಲ್ಲಿ
ಕಲ್ಲು
ತೂರಾಟ
ಸೇರಿದಂತೆ
ಹಿಂಸಾಚಾರ
ನಡೆದಿದೆ.
(ಯುಎನ್ಐ)
Story first published: Saturday, February 10, 2007, 5:30 [IST]