ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಡಿವ ನೀರಿಗೆ ತೊಂದರೆ ಇಲ್ಲ:ಮೈಸೂರು ಪಾಲಿಕೆ ಆಯುಕ್ತ
ಮೈಸೂರು:ಕಾವೇರಿ ಜಲವಿವಾದ ನ್ಯಾಯಮಂಡಳಿ ತೀರ್ಪಿನಿಂದ ನಗರ ನೀರು ಸರಬರಾಜಿಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ನಗರ ಪಾಲಿಕೆ ಆಯುಕ್ತ ಡಾ.ಕೆ.ಎನ್.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ(ಫೆಬ್ರವರಿ 06) ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ನಗರದ ಜನತೆಗೆ ಕುಡಿಯುವ ನೀರು ಪೂರೈಸಲು 2.5ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಕೈಗಾರಿಕಾ ಅಗತ್ಯಗಳಿಗೆ ಮೂರರಿಂದ ನಾಲ್ಕು ಎಂಜಿಡಿ ನೀರು ಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ, ಕಾವೇರಿ ಜಲವಿವಾದ ನ್ಯಾಯಮಂಡಳಿ ತೀರ್ಪಿನಿಂದ ನಗರ ನೀರು ಸರಬರಾಜಿಗ ೆಅತ್ಯಲ್ಪ ತೊಂದರೆಯಾಗಬಹುದು ಅಥವಾ ಯಾವುದೇ ಪರಿಣಾಮವಾಗಲಿಕ್ಕಿಲ್ಲ ಎಂದು ಹೇಳಿದರು.
ಜೆಎನ್ಎನ್ಯುಆರ್ಎಂ ಯೋಜನೆ ಸೇರಿದಂತೆ ಸರ್ಕಾರ ಹಲವಾರು ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ನಗರದ ನೀರಿನ ಪರಿಸ್ಥಿತಿ ಇನ್ನೂ ಸುಧಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
(ಏಜನ್ಸೀಸ್)
Comments
Story first published: Wednesday, February 7, 2007, 5:30 [IST]