ಬಿಸಿಯೂಟ ಜತೆಗೆ ನಂದಿನಿ ಹಾಲು: ಸರ್ಕಾರ ನಿರ್ಧಾರ
ಬೆಂಗಳೂರು : ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ನಂದಿನಿ ಹಾಲಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮೊಟ್ಟೆ ವಿವಾದಕ್ಕೆ ಅಂತಿಮ ತೆರೆಯೆಳೆಯಲು ಸರ್ಕಾರ ಯೋಚಿಸಿದೆ.
ಶಾಲಾ ಮಕ್ಕಳಿಗೆ 100 ಮಿಲಿ ಲೀಟರ್ ನಂದಿನಿ ಹಾಲು ವಿತರಿಸಲಾಗುವುದು. ಈ ಬಗ್ಗೆ ಕೆ ಎಂಎಫ್ ಜತೆ ಸರ್ಕಾರ ಮಾತುಕತೆ ನಡೆಸಿದೆ. ಹಾಲು ಹೆಚ್ಚಿನ ಅರ್ಥಿಕ ನೆರವು ಬೇಕಾಗಿರುವುದರಿಂದ ಸಂಪುಟ ಸಭೆಯಲ್ಲು ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಸುದ್ದಿ ಗಾರರಿಗೆ ತಿಳಿಸಿದರು.
ಪರ್ಯಾಯ ಅಲೋಚನೆ :
ಮೊಟ್ಟೆ ಬದಲಿಗೆ ಬಾಳೆಹಣ್ಣು ವಿತರಿಸಬೇಕೆಂದು ಅಗ್ರಹಪಡಿಸಿದ್ದು ಈಗ ಹಳೆ ಸಂಗತಿ. ಈಗ ಬಾದಾಮಿಯನ್ನು ಮೊಟ್ಟೆ ಬದಲಿಗೆ ಕೊಡುವುದು ಉತ್ತಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಾದಾಮಿಯನ್ನು ವಿತರಿಸಬೇಕಾದರೆ ಅದನ್ನು ಅಮೆರಿಕದಿಂದ ಅಮದು ಮಾಡಿಕೊಳ್ಳಬೇಕು, ಅದರ ಬದಲು ಶೇಂಗಾ(ಕಳ್ಳೆಕಾಯಿ) ನೀಡುವುದು ಸರಿ ಎಂದು ಮತ್ತೆ ಕೆಲವರ ವಾದ. ಸರ್ಕಾರ ಇನ್ನೂ ಈ ಬಗ್ಗೆ ಚಿಂತನೆಯ ಹಂತದಲ್ಲಿದೆ.
(ದಟ್ಸ್ ಕನ್ನಡ ವಾರ್ತೆ)